HEALTH TIPS

ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕ ಅನಾವರಣ


               ಮುಳ್ಳೇರಿಯ: ತುಳು ಸಾಹಿತಿ, ತುಳು ಲಿಪಿ ಸಂಶೋಧಕ ದಿ. ಡಾ.ಪುಂಡೂರು ವೆಂಕಟರಾಜ ಪುಣಿಂಚಿತ್ತಾಯರ ಹುಟ್ಟೂರು ಸಮೀಪ, ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಭಾನುವಾರ ತುಳು ಲಿಪಿ ನಾಮಫಲಕ ಅನಾವರಣ ಮಾಡಲಾಯಿತು. ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕದ ಉದ್ಘಾಟನೆಯನ್ನು ನಿವೃತ್ತ ಉಪನ್ಯಾಸಕ ಪುಂಡೂರು ಪುರುμÉೂೀತ್ತಮ ಪುಣಿಂಚಿತ್ತಾಯ, ನಿವೃತ್ತ ಶಿಕ್ಷಕ, ಕವಿ, ಯಕ್ಷಗಾನ ಕಲಾವಿದ ಪುಂಡೂರು ರಾಮಚಂದ್ರ ಪುಣಿಂಚಿತ್ತಾಯ ಜಂಟಿಯಾಗಿ ನೆರವೇರಿಸಿದರು.
       ಬೆಳ್ಳೂರು ಶ್ರೀ ಮಹಾವಿಷ್ಣು ಸೇವಾ ಸಮಿತಿ ಅಧ್ಯಕ್ಷ ಎ.ಬಿ. ಗಂಗಾಧರ ಬಲ್ಲಾಳ್ ಅಡ್ವಳ, ಸೇವಾ ಸಮಿತಿ ಕಾರ್ಯದರ್ಶಿ ಡಾ. ಮೋಹನ್ ದಾಸ್ ರೈ, ಜೈ ತುಲುನಾಡ್ ಸಂಘಟನೆಯ ಉಪಾಧ್ಯಕ್ಷ ಹರಿಕಾಂತ್ ಸಾಲ್ಯಾನ್ ಕಾಸರಗೋಡು, ಘಟಕದ ಜೊತೆ ಕಾರ್ಯದರ್ಶಿ ಜಗನ್ನಾಥ್ ಕುಲಾಲ್, ಘಟಕದ ಖಜಾಂಚಿ ಉತ್ತಮ ಉರುಳಿತಡ್ಕ ಹಾಗೂ ಇತರ ಗಣ್ಯರು ಈ ಸಂದರ್ಭ ಪಾಲ್ಗೊಂಡಿದ್ದರು.



         ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ತುಳು ಲಿಪಿ ನಾಮಫಲಕ ಅಳವಡಿಕೆಯ ಮಾಡಿದ ಶ್ರೀ ಮಹಾವಿಷ್ಣು ಸೇವಾ ಸಮಿತಿ ಬೆಳ್ಳೂರು ಇದರ ಅಧ್ಯಕ್ಷ ಎ.ಬಿ. ಗಂಗಾಧರ ಬಲ್ಲಾಳ್ ಅಡ್ವಳ ಇವರಿಗೆ ನೆನಪಿನ ಕಾಣಿಕೆ ನೀಡಿ ಜೈ ತುಲುನಾಡ್ ಸಂಘಟನೆಯು ಅಭಿನಂದಿಸಿತು.
     ಸಾಹಿತಿ ವಿಜಯರಾಜ್ ಪುಣಿಂಚಿತ್ತಾಯ ಸ್ವಾಗತಿಸಿ, ಚಂದ್ರಶೇಖರ ಆಚಾರ್ಯ ನಾಟೆಕಲ್ಲು ವಂದಿಸಿದರು. ತುಳು ನಾಟಕ ಕಲಾವಿದ ಸುಂದರ್ ರಾಜ್ ರೈ ನಾಟೆಕಲ್ಲು ನಿರೂಪಿಸಿದರು.


 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries