ಕಾಸರಗೋಡು: ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ (ಎಎಸ್ಆರ್ಬಿ) ಶಿಫಾರಸ್ಸಿನ ಮೇರೆಗೆ ಐಸಿಎಆರ್-ಸೆಂಟ್ರಲ್ ಪ್ಲಾಂಟೇಶನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪಿಸಿಆರ್ಐ), ಕಾಸರಗೋಡು ನಿರ್ದೇಶಕರಾಗಿ ಆಯ್ಕೆಯಾದ ಹಿರಿಯ ವಿಜ್ಞಾನಿ ಡಾ.ಕೆ.ಬಾಲಚಂದ್ರ ಹೆಬ್ಬಾರ್(ಕೆ.ಬಿ ಹೆಬ್ಬಾರ್) ಅವರು ಸೋಮವಾರ ಅದಿಕಾರ ಸ್ವೀಕರಿಸಿದರು.
ಪ್ರಭಾರ ನಿದೇಶಕ ಡಾ. ಕೆ. ಮುರಳೀಧರನ್ ಅವರು ಡಾ. ಕೆ.ಬಿ ಹೆಬ್ಬಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ನಿಕಟಪೂರ್ವ ಪ್ರಭಾರಿ ನಿರ್ದೇಶಕಿ ಡಾ. ಅನಿತಾ ಕರುಣ್, ಡಾ. ಸಿ. ತಂಬಾನ್, ಡಾ. ರವಿ ಭಟ್ ಹಾಗೂ ಇತರ ವಿಜ್ಞಾನಿಗಳು ಉಪಸ್ಥಿತರಿದ್ದರು.
ಕಾಸರಗೋಡು ಸಿಪಿಸಿಆರ್ಐ ನೂತನ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಅಧಿಕಾರ ಸ್ವೀಕಾರ
0
January 23, 2023