ಪೆರ್ಲ: ಶೇಣಿ ಶ್ರೀಶಾರದಾಂಬ ಎಯುಪಿ ಶಾಲಾ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಶನಿವಾರ ಜರಗಿತು. ಇದರ ಅಂಗವಾಗಿ ಬೆಳಿಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯಕ್ರಮ ಆರಂಭವಾಗಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಎಕೆಎಂ ಆಶ್ರಫ್ ಉದ್ಘಾಟಿಸಿ ಮಾತನಾಡಿದರು. ಮಕ್ಕಳ ಭವಿಷ್ಯವನ್ನು ಉನ್ನತ ಶ್ರೇಣಿಗೆ ಕೊಂಡ್ಯೊಯ್ದ ಇತಿಹಾಸ ಇರುವ ಶೇಣಿ ಶಾಲಾ ವಾರ್ಷಿಕೋತ್ಸವ ಈ ಪರಿಸರದಲ್ಲಿ ಜಾತ್ರೆಯ ವೈಭವವನ್ನು ಸೃಷ್ಠಿಸಿದೆ ಎಂದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆವಹಿಸಿದ್ದರು.
ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಆಳ್ವ, ಯುಎಇ ಎಕ್ಸ್ ಚೆಂಚ್ ಮಾಜಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಬ್ಲಾಕ್ ಪಂ.ಸದಸ್ಯ ಅನಿಲ್ ಕುಮಾರ್ ಕೆ.ಪಿ, ಪುತ್ತಿಗೆ ಗ್ರಾ.ಪಂ.ಸದಸ್ಯ ಆಸೀಫ್ ಅಲಿ, ಹೈಯರ್ ಸೆಕೆಂಡರಿ ಪ್ರಾಂಶುಪಾಲೆ ವಿಜಯಲಕ್ಷ್ಮಿ, ಶಾಲಾ ಪ್ರಬಂಧಕಿ ಶಾರದ ವೈ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಕೋಡಿ, ಮಾತೃ ಸಂಘದ ಅಧ್ಯಕ್ಷೆ ಶಶಿಪ್ರಭಾ, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರನಾಥ ನಾಯಕ್ ಮಾತನಾಡಿದರು. ಈ ಸಂದರ್ಭ ರಾಜ್ಯ, ಜಿಲ್ಲಾ ಹಾಗೂ ಉಪಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಯುಪಿ ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ನಾಯಕ್ ಶೇಣಿ ಸ್ವಾಗತಿಸಿ, ನೌಕರ ಸಂಘದ ಕಾರ್ಯದರ್ಶಿ ಸುರೇಖ ಕೆ.ಎನ್.ವಂದಿಸಿದರು. ಶ್ರೀಧರ ನಾಯಕ್ ಕುಕ್ಕಿಲ ನಿರೂಪಣೆಗೈದರು. ಬೆಳಗ್ಗಿನಿಂದ ಸಂಜೆಯ ತನಕ ಮಕ್ಕಳ ಸಾಂಸ್ಕೃತಿಕ ಪ್ರದರ್ಶನಗಳು ಜರಗಿತು.
ಶೇಣಿ ಶ್ರೀಶಾರದಾಂಬ ಯುಪಿ ಶಾಲಾ ವಾರ್ಷಿಕೋತ್ಸವ: ಸಾಂಸ್ಕøತಿಕ ಕಲೋತ್ಸವ-ಪ್ರತಿಭಾ ಪುರಸ್ಕಾರ ಪ್ರದಾನ: ಶೈಕ್ಷಣಿಕ ರಂಗದ ಶ್ರೇಯೋನ್ನತಿಗೆ ಶೇಣಿ ಶಾಲಾ ಕೊಡುಗೆ ಶ್ಲಾಘನೀಯ: ಶಾಸಕ ಎಕೆಎಂ ಆಶ್ರಫ್
0
January 22, 2023