HEALTH TIPS

ಗುರುವಾಯೂರಪ್ಪನಿಗೆ ಅರ್ಪಿಸಲು ಎರಡು ಟನ್ ತೂಕದ ಬಾಣಲೆ: ಅನಿವಾಸಿ ಮಲಯಾಳಿ ಉದ್ಯಮಿಯ ಕಾಣಿಕೆ


            ಗುರುವಾಯೂರ್: ಮನ್ನಾರ್ ಅನಿವಾಸಿ ಮಲಯಾಳಿ ಉದ್ಯಮಿಯೊಬ್ಬರು ಗುರುವಾಯೂರಪ್ಪನಿಗೆ  ಎರಡು ಟನ್ ತೂಕದ ಬೃಹತ್ ಬಾಣಲೆ ಅರ್ಪಿಸಿದ್ದಾರೆ.  ಕಣ್ಣನಿಗೆ ಭಕ್ತಿ ಪುರಸ್ಸರವಾಗಿ ಸಮರ್ಪಿಸಲು ನಿನ್ನೆ  ಘೋಷಯಾತ್ರೆಯೊಂದಿಗೆ ಗುರುವಾಯೂರಿಗೆ ಕೊಂಡೊಯ್ಯಲಾಯಿತು.
     ಇಂದು ಸಮರ್ಪಣೆ ನಡೆಯಲಿದೆ. ಬಾಣಲೆ 1500 ಲೀಟರ್ ಹಾಲನ್ನು ಕುದಿಸುವ ಸಾಮಥ್ರ್ಯ ಹೊಂದಿದೆ.  ತ್ರಿಶೂರ್ ಚೇತುವಾ ಮೂಲದ ಅನಿವಾಸಿ ಮಲಯಾಳಿ ಉದ್ಯಮಿ ಎನ್.ಬಿ. ಪ್ರಶಾಂತ್ ಕೊಡುಗೆಯಾಗಿ ಇದನ್ನು ನೀಡುತ್ತಿದ್ದಾರೆ.
         ಆರ್ಟಿಸಾಂನ್ಸ್ ಮೈಂಟೈಂನ್ಸ್ ಆಂಡ್ ಟ್ರೆಡಿಶನಲ್ ಟ್ರೇಡಿಂಗ್ ಕಂಪೆನಿ ಇದನ್ನು ನಿರ್ಮಿಸಿದ್ದು, ಮನ್ನಾರ್ ಪರುಮಲ ಪಂಥಾಪ್ಲಾಥೆಕ್, ಕಟ್ಟುಂಪುರು ಅನಂತನ್ ಆಚಾರಿ (67) ಮತ್ತು ಅವರ ಪುತ್ರ ಅನು ಅನಂತನ್ ಅವರು ನಲವತ್ತು ಕಾರ್ಮಿಕರ ಮೇಲ್ವಿಚಾರಣೆಯಲ್ಲಿ 88 ಇಂಚು ವ್ಯಾಸ ಮತ್ತು 24 ಇಂಚು ಆಗಲದ ಬೃಹತ್ ಬಾಣಲೆಯನ್ನು ನಾಲ್ಕು ತಿಂಗಳುಗಳಲ್ಲಿ ತಯಾರಿಸಿದರು.
          ಅನಂತನ್ ಆಚಾರಿ ಮತ್ತು ಅವರ ಪುತ್ರ ಅನು ಅನಂತನ್ ಕೇರಳದ ಪ್ರಸಿದ್ಧ ದೇವಾಲಯಗಳಾದ ಶಬರಿಮಲೆ, ಎಟುಮನೂರ್, ಪರಮೇಲ್ಕಾವ್, ಮಲಯಾಲಪುಳಗಳಲ್ಲಿ ಚಿನ್ನದ ಧ್ವಜಸ್ತಂಭಗಳ ಮುಖ್ಯ ಶಿಲ್ಪಿಗಳು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries