HEALTH TIPS

ಮತ್ತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಾಜಿ ಚೆರಿಯನ್: ಸಮಾರಂಭ ಬಹಿಷ್ಕರಿಸಿದ ಪ್ರತಿಪಕ್ಷಗಳು


            ತಿರುವನಂತಪುರ: ಸಂವಿಧಾನಕ್ಕೆ ಅವಮಾನ ಮಾಡಿ ಸಂಪುಟಕ್ಕೆ ರಾಜೀನಾಮೆ ನೀಡಿದ್ದ ಶಾಸಕ ಸಾಜಿ ಚೆರಿಯನ್ ಮತ್ತೆ ಸಚಿವರಾಗಿದ್ದಾರೆ.
           ತಿರುವನಂತಪುರಂನ ರಾಜಭವನದಲ್ಲಿ ನಿನ್ನೆ ಸಂಜೆ ನಡೆದ ಸಮಾರಂಭದಲ್ಲಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಆರು ತಿಂಗಳ ರಾಜೀನಾಮೆ ನಂತರ, ಸಾಜಿ ಚೆರಿಯನ್ ಸಚಿವ ಸ್ಥಾನಕ್ಕೆ ಮರಳಿದರು.
          ಈ ಸಂದರ್ಭದಲ್ಲಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಚಿವರನ್ನು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಪೀಕರ್, ಇತರ ಸಚಿವರು ಮತ್ತು ಎಲ್‍ಡಿಎಫ್ ಸಂಚಾಲಕ ಇಪಿ ಜಯರಾಜನ್ ಉಪಸ್ಥಿತರಿದ್ದರು. ಪ್ರತಿಪಕ್ಷಗಳು ಪ್ರಮಾಣ ವಚನ ಸಮಾರಂಭವನ್ನು ಬಹಿಷ್ಕರಿಸಿ ಪ್ರತಿಭಟಿಸಿದವು.
          182 ದಿನಗಳ ಅಂತರದ ನಂತರ ಸಾಜಿ ಚೆರಿಯನ್ ಮತ್ತೆ ಸಚಿವ ಸ್ಥಾನಕ್ಕೆ ಮರಳುತ್ತಿದ್ದಾರೆ. ಮೀನುಗಾರಿಕೆ, ಸಂಸ್ಕøತಿ, ಸಿನಿಮಾ ಹಾಗೂ ಯುವ ಕಲ್ಯಾಣ ಇಲಾಖೆಗಳನ್ನು ಮತ್ತೆ ಸಚಿವರಿಗೆ ಹಸ್ತಾಂತರಿಸುವ ಇಂಗಿತ ವ್ಯಕ್ತವಾಗಿದೆ.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries