ಕಾಸರಗೋಡು: ಪ್ರಧಾನ ಮಂತ್ರಿ ಆವಾಸ್ ಯೋಜನೆ, ಲೈಫ್ ವಸತಿ ಯೋಜನೆ ಕಾಞಂಗಾಡು ನಗರಸಭೆ ಫಲಾನುಭವಿಗಳ ಸಂಗಮ ಆರಂಭವಾಗಿದೆ. ಸಂಗಮವು ಮೂರು ದಿನಗಳ ಕಾಲ ನಡೆಯುತ್ತದೆ. ಕಾಞಂಗಾಡು ನಗರಸಭೆಯ ಪುರಭವನದಲ್ಲಿÁರಂಭಗೊಂಡ ಸಂಗಮವನ್ನು ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತ ಉದ್ಘಾಟಿಸಿದರು.
ನಗರಸಭೆಯ ವಿವಿಧ ವಾರ್ಡ್ ಗಳಲ್ಲಿ 1922 ಫಲಾನುಭವಿಗಳು ಸಂಗಮದಲ್ಲಿ ಭಾಗವಹಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಥಳೀಯಾಡಳಿತ ಸಂಸ್ಥೆಗಳ ಮೂಲಕ ಜಾರಿಗೊಳಿಸುವ ಪಿಎಂಎ ಲೈಫ್ ಭವನ ಯೋಜನೆಯ ಫಲಾನುಭವಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸುವುದು, ಯೋಜನೆಯನ್ನು ಪಡೆಯುವ ಕಾರ್ಯವಿಧಾನಗಳನ್ನು ಪರಿಚಯಿಸುವುದು ಸಂಗಮದ ಉದ್ದೇಶವಾಗಿದೆ. ಇತರ ಇಲಾಖೆಗಳ ಸಹಯೋಗದಲ್ಲಿ ಸ್ವ ಉದ್ಯೋಗವನ್ನು ಕಂಡುಕೊಳ್ಳಲು ಮಾರ್ಗದರ್ಶನ ನೀಡಲಾಗುತ್ತದೆ. ಯೋಜನೆಯ ಮೊದಲ ಹಂತದಲ್ಲಿ, ನಗರಸಭೆಯ 844 ಸದಸ್ಯರು ಮನೆಗಳ ನಿರ್ಮಾಣವನ್ನು ಪೂರ್ಣಗೊಳಿಸಲಾಗಿದೆ. ಎರಡನೇ ಹಂತದಲ್ಲಿ 1078 ಮಂದಿ ಅರ್ಹತೆ ಪಡೆದರ ಮನೆ ನಿರ್ಮಾಣ ನಡೆಯಲಿದೆ.
ನಗರಸಭೆ ಉಪಾಧ್ಯಕ್ಷ ಬಿಲ್ಟೆಕ್ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು.ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ.ಲತಾ, ಪಿ.ಅಹಮದ್ ಅಲಿ, ಕೆ.ಅನೀಶನ್, ಕೆ.ವಿ.ಸರಸ್ವತಿ, ಕುಟುಂಬಶ್ರೀ ಅಧ್ಯಕ್ಷರಾದ ಸೂರ್ಯ ಜಾನಕಿ, ಕೆ.ಸುಜಿನಿ, ಸದಸ್ಯ ಕಾರ್ಯದರ್ಶಿ ಜಯಚಂದ್ರ ಮೋನಾಚ, ಯೋಜನಾ ಸಂಯೋಜಕ ವಿಪಿನ್ ಮ್ಯಾಥ್ಯೂ ಮಾತನಾಡಿದರು. ನಗರಸಭೆ ಕಾರ್ಯದರ್ಶಿ ಪಿ.ಶ್ರೀಜಿತ್ ಸ್ವಾಗತಿಸಿದರು. ಶುಕ್ರವಾರ ಸಂಗಮ ಮುಕ್ತಾಯವಾಗಲಿದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ, ಲೈಫ್ ವಸತಿ ಯೋಜನೆ ಫಲಾನುಭವಿಗಳ ಸಂಗಮ ಆರಂಭ
0
January 04, 2023