HEALTH TIPS

ವ್ಯಸನದ ವಿರುದ್ಧ ಒಗ್ಗಟ್ಟಾಗಿ: ಕಾಲೋನಿಯಲ್ಲಿ ಕುಡಿತದ ವಿರುದ್ಧ ವಿದ್ಯಾರ್ಥಿಗಳು ಮತ್ತು ಕಾಲನಿವಾಸಿಗಳಿಂದ ಕುಡಿತದ ವಿರುದ್ಧ ಸಂದೇಶ


         ಕಾಸರಗೋಡು: ವಾರ್ತಾ ಸಾರ್ವಜನಿಕ ಸಂಪರ್ಕ ಇಲಾಖೆಯು ಜಿಲ್ಲಾ ಮಾಹಿತಿ ಕಛೇರಿ, ಸರಕಾರಿ ಕಾಲೇಜು ಕಾಸರಗೋಡು ಎನ್.ಎಸ್.ಎಸ್ ಘಟಕದ ಸಹಯೋಗದಲ್ಲಿ ವಿದ್ಯಾನಗರ ನೆಲ್ಕಳ ಕಾಲೋನಿಯಲ್ಲಿ ಮಾದಕ ವಸ್ತು ವಿರೋಧಿ ಜಾಗೃತಿ ಕಾರ್ಯಕ್ರಮ ನಡೆಯಿತು. ಮಾರಣಾಂತಿಕ ಮಾದಕ ವ್ಯಸನದ ವಿರುದ್ಧ ಒಟ್ಟಾಗಿ ಹೋರಾಡುವ ಮತ್ತು ಮುಂದಿನ ಪೀಳಿಗೆಯನ್ನು ಮಾದಕ ವ್ಯಸನದ ಪಿಡುಗಿನಿಂದ ರಕ್ಷಿಸುವ ಮಹತ್ವವನ್ನು ವಿಚಾರ ಸಂಕಿರಣವು ಬೊಟ್ಟುಮಾಡಿದೆ.  ಕಾಲೋನಿ ನಿವಾಸಿಗಳು ಮಾದಕ ವ್ಯಸನದ ವಿರುದ್ಧದ ಹೋರಾಟದಲ್ಲಿ ಅಬಕಾರಿಗೆ ಸಂಪೂರ್ಣ ಬೆಂಬಲ ನೀಡಿದರು.
          ನಗರಸಭೆ ಸದಸ್ಯೆ ಕೆ.ಸವಿತಾ ಟೀಚರ್ ವಿಚಾರ ಸಂಕಿರಣ ಉದ್ಘಾಟಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂದನನ್ ಅಧ್ಯಕ್ಷತೆ ವಹಿಸಿದ್ದರು. ಉಪ ಅಬಕಾರಿ ಆಯುಕ್ತ ಡಿ.ಬಾಲಚಂದ್ರನ್ ಪ್ರಾಸ್ತಾವಿಕ ಮಾತನಾಡಿದರು. ಅಬಕಾರಿ ನಿರೀಕ್ಷಕ ಟೋನಿ ಐಸಾಕ್ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾವಿಧಿ ಬೋಧಿಸಿದರು. ನಾಗರಿಕ ಅಬಕಾರಿ ಅಧಿಕಾರಿ ಪಿ. ಪ್ರಜಿತ್ ಮಾದಕ ವಸ್ತು ವಿರೋಧಿ ಜಾಗೃತಿ ತರಗತಿ ನಡೆಸಿದರು. ನೆಲಕಲ ಕಾಲೋನಿ ನಿವಾಸಿಗಳಾದ ಶ್ರೀಧರನ್, ಸುನೀಲಕುಮಾರ್, ಎನ್ ಎಸ್ ಎಸ್ ಸ್ವಯಂ ಸೇವಕ ಕಾರ್ಯದರ್ಶಿ ವಿ. ವೈಷ್ಣವಿ ಹಾಗೂ ಸ್ವಯಂ ಸೇವಕಿ ಸ್ಮಿತಾ ಮಾತನಾಡಿದರು. ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ಆಸಿಫ್ ಇಕ್ಬಾಲ್ ಕಾಕಶ್ಸೆರಿ ಸ್ವಾಗತಿಸಿ, ಮಾಹಿತಿ ಸಹಾಯಕ ಅರುಣ್ ಸೆಬಾಸ್ಟಿಯನ್ ವಂದಿಸಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries