HEALTH TIPS

ನವಕೇರಳ, ಯಶಸ್ವಿ ಲೈಫ್ ಯೋಜನೆ: ಗಣರಾಜ್ಯೋತ್ಸವ ಭಾಷಣದಲ್ಲಿ ರಾಜ್ಯಪಾಲ


        ತಿರುವನಂತಪುರಂ: ರಾಜ್ಯದಲ್ಲಿ ಗಣರಾಜ್ಯೋತ್ಸವ ಆಚರಣೆ ಅದ್ದೂರಿಯಿಂದ ನೆರವೇರಿತು. ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ತಿರುವನಂತಪುರದಲ್ಲಿ ಧ್ವಜಾರೋಹಣಗೈದರು.
             ರಾಜ್ಯಪಾಲರು ಮಲಯಾಳಂನಲ್ಲಿ ಭಾಷಣ ಆರಂಭಿಸಿದರು. ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಮಲಯಾಳಂನಲ್ಲಿ ತಮ್ಮ ಭಾಷಣ ಆರಂಭಿಸಿದರು. ರಾಜ್ಯಪಾಲರ ಭಾಷಣದಲ್ಲಿ ಪಿಣರಾಯಿ ವಿಜಯನ್ ಸರ್ಕಾರವನ್ನು ಹೊಗಳಲಾಗಿದೆ. ಸಾಮಾಜಿಕ ಭದ್ರತೆಯಲ್ಲಿ ಕೇರಳ ಉತ್ತಮ ಮಾದರಿಯಾಗಿದೆ. ಜಗತ್ತಿಗೆ ಸ್ಫೂರ್ತಿ. ಮೂಲಸೌಕರ್ಯ ವಲಯವನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರದ ನವ ಕೇರಳ ಒತ್ತು ನೀಡುತ್ತಿದೆ. ಕೈಗಾರಿಕಾ ಬೆಳವಣಿಗೆಯಲ್ಲಿ ದೇಶದ ಪ್ರಗತಿಯಿಂದ ಕೇರಳವು ಸ್ಫೂರ್ತಿ ಪಡೆದಿದೆ. ಕೇರಳ ಸ್ಟಾರ್ಟ್‍ಅಪ್ ಮಿಷನ್ ಉತ್ತಮ ಸಾಧನೆ ಮಾಡಿದೆ ಎಂದರು.
            ರಾಜ್ಯಪಾಲರು ಲೈಫ್ ಯೋಜನೆಯನ್ನು ಶ್ಲಾಘಿಸಿದರು. ಲೈಫ್ ಯೋಜನೆಯು ಎಲ್ಲರಿಗೂ ವಸತಿ ಎಂಬ ರಾಷ್ಟ್ರದ ಕನಸನ್ನು ಬಲಪಡಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಕೇರಳ ದೊಡ್ಡ ಸಾಧನೆ ಮಾಡಿದೆ. ಆದ್ರ್ರಾಂ ಮಿಷನ್ ಕೇರಳದ ಆರೋಗ್ಯ ಕ್ಷೇತ್ರವನ್ನು ಪುನರ್ರಚಿಸಿದೆ ಎಂದರು.
         ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವೈದ್ಯಕೀಯ ಕಾಲೇಜು ಆಸ್ಪತ್ರೆವರೆಗೆ ಈ ಪ್ರಗತಿ ಎದ್ದು ಕಾಣುತ್ತಿದೆ. ಕೇರಳದ ಕೃಷಿ ಯೋಜನೆಗಳು ರೈತರಿಗೆ ಆಹಾರ ಭದ್ರತೆ, ಉತ್ತಮ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಖಾತ್ರಿಪಡಿಸಿದೆ ಎಂದು ರಾಜ್ಯಪಾಲರು ಹೇಳಿದರು.




Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries