ಕಾಸರಗೊಡು: ಮಹಿಳೆಯರನ್ನು ಶಪಿಸುವ ದುಷ್ಟ ಶಕ್ತಿಗಳ ಮತ್ತು ಪುರೋಹಿತಶಾಹಿ ರಚಿಸಿದ ಅಂಧ ಕಾನೂನುಗಳ ವಿರುದ್ಧ ತಮ್ಮ ಸಾಹಿತ್ಯ ಕೃತಿಗಳ ಮೂಲಕ ಸಾರಾ ಅಬೂಬಕ್ಕರ್ ಬೆಳಕು ಚೆಲ್ಲಿದ್ದಾರೆ ಎಂದು ಡಾ. ಖದೀಜಾ ಮುಮ್ತಾಜ್ ತಿಳಿಸಿದ್ದಾರೆ.
ಅವರು ಕಾಸರಗೋಡು ಕೋಲಾಯಿ ಲೈಬ್ರರಿ ವತಿಯಿಂದ ಖ್ಯಾತ ಸಾಹಿತಿ ಸಾರಾ ಅಬೂಬಕರ್ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ 'ಚಂದ್ರಗಿರಿಯ ಆತ್ಮೀಯ ಸ್ನೇಹಿತೆಗೆ ವಿದಾಯ' ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.
ಪ್ರೊ. ಕೆ.ಪಿ ಜಯರಾಜ್ ಸಮಾರಂಭ ಉದ್ಘಾಟಿಸಿದರು. ಕೋಲಯ್ ಲೇಡೀಸ್ ವಿಂಗ್ ಅಧ್ಯಕ್ಷೆ ಸುಲೇಖಾ ಮಾಹಿನ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ಲಾ ಮೊಯ್ದೀನ್, ವಕೀಲ ಅಬ್ದುಲ್ಲ ಪುತಿಯಪುರ, ಗಿರಿದರ್ ರಾಘವನ್, ಸಿ.ಎಲ್.ಹಮೀದ್, ಮುಮ್ತಾಜ್ ಟೀಚರ್, ರಜುಲಾ ಶಂಸುದ್ದೀನ್, ಹಸೈನಾರ್ ತೊಟ್ಟುಂಭಾಗಂ, ಸಮೀರ್ ಪುತಿಯ ಪುರ, ಉಸ್ಮಾನ್ ಕಡವತ್, ಸಿದ್ದೀಕ್ ಓಮನ್, ಸಾರಾ ಅಬೂಬಕರ್ ಅವರ ಕುಟುಂಬಸ್ಥರು, ಕಾಸರಗೊಡಿನಸಾಹಿತಿಗಳು ಉಪಸ್ಥಿತರಿದ್ದರು. ಸಕಾನಿಯ ಬೆದಿರ ಸ್ವಾಗತಿಸಿದರು.