HEALTH TIPS

ಪಾವೂರು ಗೋವಿಂದ ಲಚ್ಚಿಲ್ ನಲ್ಲಿ ಪ್ರತಿಷ್ಠಾ ಕಲಶಾಭಿಷೇಕ, ಕೊರಗತನಿಯ ಕೋಲ ಸಂಪನ್ನ


          ಮಂಜೇಶ್ವರ: ಪಾವೂರು ಶ್ರೀ ಕೊರಗತನಿಯ ಸಾನಿಧ್ಯ ಗೋವಿಂದ ಲಚ್ಚಿಲ್ ಇದರ ಪ್ರತಿಷ್ಠಾ ಕಲಶಾಭಿಷೇಕ,ಧಾರ್ಮಿಕ ಸಭಾ ಕಾರ್ಯಕ್ರಮ ,ಹಾಗೂ ಕೊರಗತನಿಯ ಕೊಲೋತ್ಸವ ಸಂಪನ್ನಗೊಂಡಿದೆ.



        ವರ್ಕಾಡಿ ದಿನೇಶ್ ಕೃಷ್ಣ ತಂತ್ರಿ ಅವರ ನೇತೃತ್ವದಲ್ಲಿ ಪ್ರತಿಷ್ಠಾ ಕಲಶಾಭಿಷೇಕ ನಡೆಯಿತು. ಮಹಾಪೂಜೆಯ ಬಳಿಕ ಧಾರ್ಮಿಕ ಸಭೆ ನಡೆಯಿತು. ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಯವರನ್ನು ಗುಳಿಗ ಬನದಿಂದ ಮೆರವಣಿಗೆಯ ಮೂಲಕ ಸನ್ನಿಧಾನಕ್ಕೆ ಬರಮಾಡಿಕೊಳ್ಳಲಾಯಿತು. ಬಳಿಕ  ಆಶೀರ್ವಚನ ನೀಡಿದರು. ಸನ್ನಿಧಾನದ ತಂತ್ರವರ್ಯ ದಿನೇಶ್ ಕೃಷ್ಣ ತಂತ್ರಿಯವರು ಸಂದೇಶ ನೀಡಿದರು. ಧಾರ್ಮಿಕ ನಾಯಕರಾದ ಶಿವಕೃಷ್ಣ ಧಾರ್ಮಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಐತಪ್ಪ ಶೆಟ್ಟಿ ದೇವಂದಪಡ್ಪು, ಚಂದ್ರಹಾಸ ಪೂಜಾರಿ ಮುಡಿಮಾರು, ಅರಿಬೈಲು ಬರ್ವ ಧೂಮಾವತಿ ಕ್ಷೇತ್ರದ ದರ್ಶನ ಪಾತ್ರಿ ಅರಸ ಪೂಜಾರಿ ಕುದುಕೋರಿ, ಪದ್ಮನಾಭ ಅಡ್ಡಂತಾಯ ಕಾಪು ಬಾಳಿಕೆ, ಉದ್ಯಮಿ ಚಾವಡಿಬೈಲುಗುತ್ತು ಪ್ರವೀಣ್ ಭಂಡಾರಿ, ಅರುಣ್ ಕುಮಾರ್ ಶೆಟ್ಟಿ ಪೆರ್ಮಾನಂಜಿ, ದೈವ ನರ್ತಕ ಐತ್ತಪ್ಪ ಮರಿಕಾಪು, ಚಂದ್ರಹಾಸ ಶೆಟ್ಟಿ ಕಂಗುಮೆ, ಸೇವಾಸಮಿತಿಯ ವಾಮನ ಮುಡಿಮಾರ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷÀ ರವಿಮುಡಿಮಾರ್ ಸ್ವಾಗತಿಸಿ, ವಂದಿಸಿದರು. ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಕೊಂಡೆಯೂರು ಅನಂತಪದ್ಮನಾಭ ಭಜನಾ ಮಂಡಳಿಯವರಿಂದ ಭಜನ ಸಂಕೀರ್ತನೆ ನಡೆಯಿತು. ರಾತ್ರಿ 8 ಕ್ಕೆ ಕೊರಗತನಿಯ ಕೋಲೋತ್ಸವ ನಡೆದು ನಂತರ ಅನ್ನಸಂತರ್ಪಣೆಯೊಂದಿಗೆ  ಕಾರ್ಯಕ್ರಮ ಸಂಪನ್ನಗೊಂಡಿತು.



 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries