ತ್ರಿಶೂರ್: ಕೊಡುಂಗಲ್ಲೂರು ತಾಲೂಕಿನಲ್ಲಿ ಇಂದು ಹಿಂದೂ ಐಕ್ಯವೇದಿ ಹರತಾಳಕ್ಕೆ ಕರೆನೀಡಿತ್ತು. ಕೊಡುಂಗಲ್ಲೂರು ಶ್ರೀ ಕುರುಂಬಾ ಭಗವತಿ ದೇವಸ್ಥಾನದ ಮೂಲಸ್ಥಾನ ವಿಗ್ರಹವನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಹರತಾಳ ನಡೆಸಲಾಗುತ್ತಿದೆ.
ಬೆಳಗಿನ ಜಾವ 4:30ರ ಸುಮಾರಿಗೆ ದಾಳಿ ನಡೆದಿದೆ ಎಂದು ಪೋಲೀಸರು ತಿಳಿಸಿದ್ದಾರೆ. ವಿಗ್ರಹ ಧ್ವಂಸ ಮಾಡಿದ ವ್ಯಕ್ತಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಕಳವು ವಿರೋಧಿಸಿ ಹಿಂದೂ ಐಕ್ಯವೇದಿ ಇಂದು ಹರತಾಳ ಘೋಷಿಸಿದ್ದು ಶಾಂತಯುತವಾಗಿತ್ತೆಂದು ತಿಳಿದುಬಂದಿದೆ.
ಕೊಡುಂಗಲ್ಲೂರು ಭಗವತಿ ದೇವಸ್ಥಾನದ ಮೂಲಸ್ಥಾನ ವಿಗ್ರಹ ಧ್ವಂಸ; ಹಿಂದೂ ಐಕ್ಯವೇದಿಯಿಂದ ಹರತಾಳ
0
January 24, 2023