ಸಮರಸ ಚಿತ್ರಸುದ್ದಿ: ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯ ಸಂಸ್ಕøತ ಅಧ್ಯಾಪಕ ವಿಘ್ನೇಶ್ ಶರ್ಮ ಅವರು ಮಂಡಿಸಿದ 'ಭಾಗವತ ಪುರಾಣದಲ್ಲಿ ಪ್ರಕೃತಿ ಸೌಂದರ್ಯ ಒಂದು ವಿಮರ್ಶಾತ್ಮಕ ಅಧ್ಯಯನ' ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಸ್ಕೃತ ವಿಭಾಗದ ಪ್ರಾಧ್ಯಾಪಕ ಡಾ.ಕುಮಾರ ಸುಬ್ರಹ್ಮಣ್ಯ ಭಟ್ ಮಾರ್ಗದರ್ಶನವನ್ನು ನೀಡಿದ್ದರು. ಇವರು ವಿಶ್ವೇಶ್ವರ ಭಟ್ ಮತ್ತು ಈಶ್ವರಿ ದಂಪತಿಗಳ ಸುಪುತ್ರ.
ವಿಘ್ನೇಶ್ವರ ಶರ್ಮರಿಗೆ ಡಾಕ್ಟರೇಟ್
0
February 02, 2023