ಕಾಸರಗೋಡು: ವಯೋವೃದ್ಧರ ಕಲ್ಯಾಣಕ್ಕೆ ಕೇಂದ್ರ ಸರಕಾರ ಆದ್ಯತೆ ನೀಡುತ್ತಿದೆ ಎಂದು ಕೇಂದ್ರ ಸಮಾಜನೀತಿ ಸಹಸಚಿವ ಎ.ನಾರಾಯಣ ಸ್ವಾಮಿ ತಿಳಿಸಿದರು.
ವಯೋಶ್ರೀ ಯೋಜನೆ ಅಂಗವಾಗಿ ಹಿರಿಯ ಪ್ರಜೆಗಳಿಗೆ ಸಹಾಯ ಉಪಕರಣಗಳ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸಮಾಜನೀತಿ, ಪ್ರಬಲೀಕರಣ ಮಂತ್ರಾಲಯ, ರಾಜ್ಯ ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾಡಳಿತೆ ಜಂಟಿ ವತಿಯಿಂದ ಕಾರ್ಯಕ್ರಮ ನಡೆಯಿತು.
ಸಮಾಜದ ಅಗತ್ಯ ಅರಿತುಕೊಂಡು ಕೇಂದ್ರ ಸಮಾಜನೀತಿ ಇಲಾಖೆ ಚಟುವಟಿಕೆ ನಡೆಸುತ್ತದೆ. ರಾಷ್ಟ್ರೀಯ ವಯೋಶ್ರೀ ಮೂಲಕ ವಯೋವೃದ್ಧರಿಗೆ ಸರಕಾರ ಆಸರೆಯಾಗುತ್ತದೆ. ಆಲಿಂಕೋ ಮೂಲಕ ಪೂರ್ಣರೂಪದಲ್ಲಿ ಉಚಿತ ರೂಪದಲ್ಲಿ ಸಹಾಯ ಉಪಕರಣಗಳು ಒದಗುತ್ತವೆ ಎಂದವರು ನುಡಿದರು.
ಕರ್ನಾಟಕದಲ್ಲಿ ಸ್ಥಳಿಯಾಡಳಿತ ಸಂಸ್ಥೆಗಳು ವಯೋಜನರಿಗಾಗಿ ಬಜೆಟ್ ನಲ್ಲಿ ಶೇ 2 ಪಾಲು ಮೀಸಲಿರಿಸಲಾಗುತ್ತದೆ. ಇದಕ್ಕೆ ಸಮಾನಾಗಿ ಕೇರಳದಲ್ಲಿ ರಾಜ್ಯ ಸರಕಾರ ಪ್ರವರ್ತಿಸಬೇಕುಹಿಂದುಳಿದವರಿಗೆ, ವಯೋವೃದ್ಧರಿಗೆ, ವಿಶೇಷಚೇತನರಿಗೆ ಸಹಕಾರಿಯಾಗಬೇಕು ಎಂದವರು ಆಗ್ರಹಿಸಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಇ.ಚಂದ್ರಶೇಖರನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್, ಉಪಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಮಂಜೇಶ್ವರ ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಷಮೀನಾ ಟೀಚರ್, ಚೆಮ್ನಾಡ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಫೈಝಾ ಅಬೂಬಕ್ಕರ್, ಚೆಂಗಳ ಪಂಚಾಯತ್ ಅಧ್ಯಕ್ಷ ಖಾದರ್ ಬದ್ರಿಯಾ, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಷಿಂನಾ ಎಸ್.ಎಸ್., ನೆಹರೂ ಕಾಲೇಜು ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ವಿಜಯಕುಮಾರ್ ವಿ., ಕೆ.ಎಸ್.ಎಸ್.ಎಂ.ಜಿಲ್ಲಾ ಸಂಚಾಲಕ ಜಿಷೋ ಜೇಮ್ಸ್, ಅಲಿಂಕೋ ಬೆಂಗಳೂರು ಯೂನಿಟ್ ಮುಖ್ಯಸ್ಥ ಎ.ವಿ.ಅಶೋಕ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು. ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ವಿವಿಧ ಕಲಾಕಾರ್ಯಕ್ರಮಗಳು ಜರುಗಿದುವು. 910 ಮಂದಿ ಫಲಾನುಭವಿಗಳಿಗೆ 50 ಲಕ್ಷ ರೂ. ಮೌಲ್ಯದ ಸಹಾಯ ಉಪಕರಣಗಳನ್ನು ಈ ವೇಳೆ ವಿತರಣೆ ನಡೆಸಲಾಯಿತು. ಗಾಲಿಕುರ್ಚಿ, ವಾಕರ್, ಕನ್ನಡಕಗಳು, ಶ್ರವಣ ಯಂತ್ರ ಸಹಿತ ವಿವಿಧ ಉಪಕರಣಗಳನ್ನು ವಿತರಣೆ ನಡೆಸಲಾಯಿತು.

