HEALTH TIPS

ಆಪರೇಷನ್ ಸಿಂಧೂರ: ರಾಮಾಯಣವನ್ನು ಉದಾಹರಿಸಿದ ಕಿರಣ್ ರಿಜಿಜು

ನವದೆಹಲಿ: 'ಭಾರತ ಎಳೆದ ಕೆಂಪು ಗೆರೆಯನ್ನು ಪಾಕಿಸ್ತಾನ ಯಾವಾಗ ದಾಟಿತೋ ಆಗಲೇ ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿದೆ' ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಅದಕ್ಕೂ ಮುನ್ನ ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ಆ‍ಪರೇಷನ್‌ ಸಿಂಧೂರ ಕುರಿತ ಚರ್ಚೆ ಇಂದು ಆರಂಭವಾಗಲಿದೆ. ಯಾವಾಗ ರಾವಣ ಲಕ್ಷ್ಮಣ ರೇಖೆಯನ್ನು ದಾಟಿದನೋ, ಆಗ ಲಂಕೆಗೆ ಬೆಂಕಿ ಬಿದ್ದಿತು. ಅದೇ ರೀತಿ ಪಾಕಿಸ್ತಾನ ಭಾರತ ಎಳೆದ ಗೆರೆಯನ್ನು ಯಾವಾಗ ದಾಟಿತೋ, ಉಗ್ರರ ಶಿಬಿರಗಳಿಗೆ ಬೆಂಕಿ ಬಿದ್ದಿತು' ಎಂದು ಬರೆದುಕೊಂಡಿದ್ದಾರೆ..

ಲೋಕಸಭೆಯಲ್ಲಿ ಭಾರತದ ಬಲಿಷ್ಠ, ಯಶಸ್ವಿ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಕುರಿತು ವಿಶೇಷ ಚರ್ಚೆಯನ್ನು ನಡೆಸಲು ರಕ್ಷಣಾ ಸಚಿವ ರಾಜನಾಥ ಸಿಂಗ್ ಸಜ್ಜಾಗಿದ್ದಾರೆ.

ಇನ್ನೊಂದೆಡೆ 'ಭಾರತ ಮತ್ತು ಪಾಕಿಸ್ತಾನ ನಡುವಿನ ಪರಮಾಣು ಯುದ್ಧವನ್ನು ತಪ್ಪಿಸಲು ಕದನ ವಿರಾಮಕ್ಕೆ ನಾನು ಮಧ್ಯಸ್ಥಿಕೆ ವಹಿಸಿದ್ದೇನೆ' ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಯ ಕುರಿತು ಪ್ರಶ್ನಿಸಲು ವಿಪಕ್ಷಗಳು ಕಾದಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries