ಮುಳ್ಳೇರಿಯ: ಕಾವ್ಯಗಳನ್ನು ತಿಳಿಯುವ ಮೂಲಕ ಜೀವನ ಮೌಲ್ಯಗಳನ್ನು ಪಡೆದುಕೊಳ್ಳಬಹುದು ಎಂದು ಜ್ಯೋತಿ ಕುಮಾರಿ ಹೇಳಿದರು.
ಅವರು ಜಿವಿಎಚ್ಎಸ್ ಎಸ್ ಕಾರಡ್ಕ ಶಾಲೆಯಲ್ಲಿ ನಡೆದ ಗಮಕ ಶ್ರಾವಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಗಮಕ ಕಲಾ ಪರಿಷತ್ತು ಕಾಸರಗೋಡು ಘಟಕ, ಸಿರಿಗನ್ನಡ ವೇದಿಕೆಗಳ ಸಹಯೋಗದೊಂದಿಗೆ ನಡೆಯುತ್ತಿರುವ ಗಮಕ ಶ್ರಾವಣವನ್ನು ಕಾರಡ್ಕ ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯು ಸಂಯೋಜಿಸಿತ್ತು.
ಕಾರ್ಯಕ್ರಮವನ್ನು ಪಿಟಿಎ ಅಧ್ಯಕ್ಷ ಸುರೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿದರು. ಗಮಕ ಕಲಾ ಪರಿಷತ್ತು ಅಧ್ಯಕ್ಷ ತೆಕ್ಕೇಕೆರೆ ಶಂಕರನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿರಿಗನ್ನಡ ವೇದಿಕೆಯ ಅಧ್ಯಕ್ಷ ವಿ.ಬಿ.ಕುಳಮರ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕ ಸಂಜೀವ ಎಂ ಶುಭಹಾರೈಸಿದರು. ನೌಕರ ಸಂಘದ ಕಾರ್ಯದರ್ಶಿ ಡಾ.ಅಶೋಕ, ಯಕ್ಷಗಾನ ಅರ್ಥಧಾರಿ ಶ್ಯಾಮ ಆಳ್ವ ಕಡಾರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಕು. ದೇವಿಕಾ ಪ್ರಾರ್ಥಿಸಿದರು. ಕು.ಭೂಮಿಕ ಸ್ವಾಗತಿಸಿ, ಕು.ಅಭೀಕ್ಷ ವಂದಿಸಿದರು. ಶಿಕ್ಷಕ ಡಾ. ಶ್ರೀಶ ಕುಮಾರ ಪಂಜಿತ್ತಡ್ಕ ನಿರೂಪಿಸಿದರು.
ತೊರವೆ ರಾಮಾಯಣದ ಭಾರ್ಗವ ಗರ್ವಭಂಗ ಕಥಾ ಭಾಗವನ್ನು ಮಾಧವ ಭಟ್ ಪಣಿಯೆ ವಾಚಿಸಿದರು. ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ. ಗೋಪಾಲಕೃಷ್ಣ ಭಟ್ ವ್ಯಾಖ್ಯಾನಿಸಿದರು.

.jpg)
