HEALTH TIPS

ಮಾರ್ಪನಡ್ಕ ವಾರ್ಡ್ ಸಮಾವೇಶ

ಬದಿಯಡ್ಕ : ಬಿಜೆಪಿ ಜಯನಗರ 11ನೇ ವಾರ್ಡ್ ಸಮಿತಿ ಸಮಾವೇಶ ಮಾರ್ಪನಡ್ಕ ಪದ್ಮಶ್ರೀ ಸಭಾಂಗಣದಲ್ಲಿ ಜರಗಿತು. ಸಭೆಯನ್ನು ಪಕ್ಷದ ಜಿಲ್ಲಾಧ್ಯಕ್ಷೆ ಅಶ್ವಿನಿ. ಎಂ.ಎಲ್ ಉದ್ಘಾಟಿಸಿ ಮಾತನಾಡಿದರು. ಪಕ್ಷದ ಕೋಝಿಕೋಡ್ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಮುಖ್ಯ ಅತಿಥಿಗಳಾಗಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ವಾರ್ಡು ಸದಸ್ಯರಾದ ಹರೀಶ ಗೋಸಾಡ ಇವರನ್ನು ವಾರ್ಡ್ ಸಮಿತಿಯ ಪರವಾಗಿ ಅಶ್ವಿನಿ ಎಂ.ಎಲ್. ಶಾಲು ಹೊದಿಸಿ ಸನ್ಮಾನಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸುದೇವ ಭಟ್ ಚೋಕೆಮೂಲೆ ವಹಿಸಿದ್ದರು. ಸಭೆಯಲ್ಲಿ ಬೂತ್ ಅಧ್ಯಕ್ಷ ನಾರಾಯಣ ನಾಯಕ್, ದಾಮೋದರ ಮಾರ್ಪನಡ್ಕ, ಸೂರ್ಯನಾರಾಯಣ ಮಾಸ್ತರ್ ಮಾಳಿಗೆಮನೆ, ಶಿವಪ್ಪ ನಾಯಕ್, ನಾಗರಾಜ ಭಟ್ ಉಪ್ಪಂಗಳ, ಕೃಷ್ಣ ನಾಯಕ್ ಉಪಸ್ಥಿತರಿದ್ದರು. ಸವಿತಾ ಮಾರ್ಪನಡ್ಕ ಸ್ವಾಗತಿಸಿ, ಪ್ರಕಾಶ ಪಾವೂರು ವಂದಿಸಿದರು. ಸುರೇಶ್ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries