HEALTH TIPS

ಎಸ್‌ಐಆರ್‌ | ಹಾವಿನ ಹುತ್ತದಲ್ಲಿ ಕಾರ್ಬಾಲಿಕ್ ಆಮ್ಲ ಸುರಿದಂತೆ: ಸುವೇಂದು ಅಧಿಕಾರಿ

 ಕೋಲ್ಕತ್ತ: ಚುನಾವಣಾ ಆಯೋಗವು ಕೈಗೊಳ್ಳುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು(ಎಸ್‌ಐಆರ್‌) ಹಾವಿನ ಹುತ್ತದೊಳಗೆ ಕಾರ್ಬಾಲಿಕ್‌ ಆಮ್ಲ ಸುರಿದಂತೆ ಎಂದು ಹೋಲಿಕೆ ಮಾಡಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿ, 'ಇದು ಪಶ್ಚಿಮ ಬಂಗಾಳದಲ್ಲಿ ನೆಲಸಿರುವ ನುಸುಳುಕೋರರನ್ನು ಹೊರೆಗೆಳೆಯುವ ಪ್ರಕ್ರಿಯೆ' ಎಂದು ಭಾನುವಾರ ಹೇಳಿದ್ದಾರೆ. 


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಆಡಳಿತಾರೂಢ ಟಿಎಂಸಿ ನೆರವಿನಿಂದ ನುಸುಳುಕೋರರು ರಾಜ್ಯದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಗಡಿಪಾರು ಮಾಡಲಾಗುವುದು' ಎಂದು ಹೇಳಿದ್ದಾರೆ.

'ಹುತ್ತದೊಳಗೆ ಕಾರ್ಬಾಲಿಕ್‌ ಆಮ್ಲ ಸುರಿದಾಗ ಹಾವುಗಳು ಹೊರಬರುತ್ತವೆ. ಅವುಗಳನ್ನು ಹಿಡಿದು ಹೊರಗೆ ಎಸೆಯಲಾಗುತ್ತದೆ. ಚುನಾವಣಾ ಆಯೋಗವು ನುಸುಳುಕೋರರ ಸಮಸ್ಯೆಗೆ 'ಎಸ್‌ಐಆರ್‌' ಎಂಬ ಸೂಕ್ತ ಔಷಧಿ ಬಳಕೆ ಮಾಡುತ್ತಿದೆ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಅಧಿಕಾರಿ ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries