HEALTH TIPS

ಕಲಾಪಕ್ಕೆ ಹಾಜರಾಗಲು ಹಣ ಠೇವಣಿ: ಸಂಸದ ರಶೀದ್ ಪ್ರಕರಣದಲ್ಲಿ ಹೈಕೋರ್ಟ್ ಭಿನ್ನ ತೀರ್ಪು

ನವದೆಹಲಿ: ಕಸ್ಟಡಿಯಲ್ಲಿರುವಾಗ ಸಂಸತ್ ಅಧಿವೇಶನಗಳಿಗೆ ಹಾಜರಾಗಲು ಸುಮಾರು ₹ 4 ಲಕ್ಷ ಹಣ ಠೇವಣಿ ಇಡಬೇಕು ಎನ್ನುವ ಆದೇಶವನ್ನು ಮರುಪರಿಶೀಲಿಸಲು ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದ ಅಬ್ದುಲ್ ರಶೀದ್ ಸಲ್ಲಿಸಿದ್ದ ಅರ್ಜಿಗೆ ದೆಹಲಿ ಹೈಕೋರ್ಟ್ ಭಿನ್ನಮತದ ತೀರ್ಪು ನೀಡಿದೆ.

ನ್ಯಾಯಮೂರ್ತಿ ವಿವೇಕ್ ಚೌಧರಿ ಅರ್ಜಿಯನ್ನು ತಿರಸ್ಕರಿಸಿದರೆ, ನ್ಯಾಯಮೂರ್ತಿ ಅನುಪ್ ಜೈರಾಮ್ ಭಂಭಾನಿ ಅರ್ಜಿಯನ್ನು ಪುರಸ್ಕರಿಸಿದ್ದಾರೆ.

'ನಾಬಿಬ್ಬರು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ನಾಬಿಬ್ಬರು ಪ್ರತ್ಯೇಕ ತೀರ್ಪು ನೀಡಿದ್ದೇವೆ. ಸೂಕ್ತ ಆದೇಶಕ್ಕಾಗಿ ನಾವು ಇದನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಇಡುತ್ತೇವೆ' ಎಂದು ಉಭಯ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೇಳಿದ್ದಾರೆ.

'ನನ್ನ ಸಹೋದರ ಈ (ಜೆ ಭಂಭಾನಿ) ಅರ್ಜಿಯನ್ನು ಪುರಸ್ಕರಿಸಿದ್ದಾರೆ, ನಾನು ತಿರಸ್ಕರಿಸಿದ್ದೇನೆ' ಎಂದು ನ್ಯಾಯಮೂರ್ತಿ ಚೌಧರಿ ಹೇಳಿದ್ದಾರೆ.

ಕಸ್ಟಡಿಯಲ್ಲಿದ್ದುಕೊಂಡು ಸಂಸತ್ ಕಲಾಪಗಳಿಗೆ ಹಾಜರಾಗಬೇಕಾದರೆ ಸುಮಾರು ₹ 4 ಲಕ್ಷ ಠೇವಣಿ ಇಡಬೇಕು ಎಂದು ಮಾರ್ಚ್ 25 ರಂದು ಕೋರ್ಟ್ ತೀರ್ಪು ನೀಡಿತ್ತು.

ಭಯೋತ್ಪಾದನೆಗೆ ಹಣಕಾಸು ನೆರವು ಪ್ರಕರಣದಲ್ಲಿ ಎನ್‌ಐಎಯಿಂದ ಬಂಧಿರಾಗಿರುವ ಅವರು, 2019ರಿಂದ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಅವರಿಗೆ ಒಂದು ತಿಂಗಳ ಮಧ್ಯಂತರ ಜಾಮೀನು ನೀಡಲಾಗಿತ್ತು.

2024 ರ ಲೋಕಸಭಾ ಚುನಾವಣೆಯಲ್ಲಿ ಒಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries