HEALTH TIPS

ಪಶ್ಚಿಮಬಂಗಾಳ| ಎಸ್‌ಐಆರ್‌ಗೆ ವಿರೋಧ: ಚುನಾವಣಾ ಆಯೋಗದ ವಿಶೇಷ ವೀಕ್ಷಕನಿಗೆ ಘೇರಾವ್

ಕೋಲ್ಕತ್ತ: ಪಶ್ಚಿಮಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ಐಆರ್‌) ವಿರೋಧ ಮುಂದುವರಿದಿದೆ.

ಶಿರಾಕೋಲ್‌ ಪ್ರೌಢಶಾಲೆಯಲ್ಲಿರುವ ಎಸ್‌ಐಆರ್‌ ಕೇಂದ್ರಕ್ಕೆ ಚುನಾವಣಾ ಆಯೋಗದ ವಿಶೇಷ ವೀಕ್ಷಕ ಸಿ. ಮುರುಗನ್‌ ಭೇಟಿ ನೀಡಿದ್ದಾಗ ಸ್ಥಳೀಯರು ಘೇರಾವ್ ಹಾಕಿದ್ದಾರೆ.

ಟಿಎಂಸಿಯ ಜಿಲ್ಲಾ ಪರಿಷತ್ ಅಧ್ಯಕ್ಷ ಮುಜಿಬರ್ ರೆಹಮಾನ್ ಮೊಲ್ಲಾ ನೇತೃತ್ವದಲ್ಲಿ ಪ್ರತಿಭಟಿಸಿದ ಸ್ಥಳೀಯರು, ಎಸ್‌ಐಆರ್ ಅನುಷ್ಠಾನಗೊಳಿಸದಂತೆ ತಾಕೀತು ಮಾಡಿದರು.

ದಕ್ಷಿಣ 24 ಪರಗಣ ಜಿಲ್ಲೆಯ ಮಗರಾಹಾಟ್‌ನಲ್ಲಿರುವ ಎಸ್‌ಐಆರ್‌ ಕೇಂದ್ರಕ್ಕೆ ಭೇಟಿ ನೀಡಿದಾಗ ಸಿ.ಮುರುಗನ್‌ ಅವರ ವಾಹನಕ್ಕೆ ಸ್ಥಳೀಯರು ಹಾನಿ ಮಾಡಿದ್ದಾರೆ. ಸ್ಥಳದಿಂದ ವಾಹನ ವಾಪಸ್‌ ತೆರಳದಂತೆ ತಡೆ ಹಾಕಿದರು. ಪೊಲೀಸರ ಭದ್ರತೆ ನಡುವೆಯೂ ಕಾರಿನ ಬಾನೆಟ್‌ ಮೇಲೆ ಹತ್ತಿ ಗಾಜನ್ನು ಒಡೆದುಹಾಕಲು ಯತ್ನಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಿತ್ತರಗೊಂಡಿದೆ.

ಕಾರಿನ ಚಾಲಕನ ಬದಿಯ ಬಾಗಿಲಿನ ಹಿಡಿ ಸೀಳಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು, ಚುನಾವಣಾ ಆಯೋಗದ ಮೂಲಗಳು ಈ ವಿಡಿಯೊವನ್ನು ಹಂಚಿಕೊಂಡಿವೆ. ಹೌರಾ ಜಿಲ್ಲೆಯಲ್ಲೂ ವಿರೋಧ ವ್ಯಕ್ತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries