HEALTH TIPS

ತುರ್ತು ಕರೆ: ಬಾಂಗ್ಲಾ ರಾಯಭಾರಿ ಢಾಕಾಕ್ಕೆ ದೌಡು

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿ ಮತ್ತು ಅದರ ಬೆನ್ನಲ್ಲೇ ಭಾರತ-ಬಾಂಗ್ಲಾದೇಶದ ನಡುವೆ ಹದಗೆಟ್ಟಿರುವ ದ್ವಿಪಕ್ಷೀಯ ಸಂಬಂಧದ ಕುರಿತು ಚರ್ಚಿಸಲು, ಭಾರತದಲ್ಲಿನ ಬಾಂಗ್ಲಾದ ರಾಯಭಾರಿ ರಿಯಾಜ್‌ ಹಮೀದುಲ್ಲಾ ಅವರನ್ನು ಅಲ್ಲಿನ ವಿದೇಶಾಂಗ ಸಚಿವಾಲಯ ತುರ್ತಾಗಿ ಕರೆಯಿಸಿಕೊಂಡಿದೆ.

ಸೋಮವಾರ ತಡರಾತ್ರಿ ರಿಯಾಜ್‌ ಢಾಕಾಕ್ಕೆ ದೌಡಾಯಿಸಿದ್ದಾರೆ.

ಭಾರತ ಮತ್ತು ಬಾಂಗ್ಲಾ ನಡುವಿನ ದ್ವಿಪಕ್ಷೀಯ ಸಹಕಾರವನ್ನು ಉತ್ತಮ ಪಡಿಸುವ ಉದ್ದೇಶದಿಂದ ವಿದೇಶಾಂಗ ಸಚಿವಾಲಯ ರಿಯಾಜ್‌ ಅವರನ್ನು ತುರ್ತಾಗಿ ಕರೆಯಿಸಿಕೊಂಡಿದೆ ಎಂದು ನಂಬಲರ್ಹ ಮೂಲಗಳನ್ನು ಉಲ್ಲೇಖಿಸಿ ಬಾಂಗ್ಲಾದ ದಿನಪತ್ರಿಕೆ ಪ್ರೊಥಾಮ್‌ ಅಲೊ ವರದಿ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries