ಪಣಜಿ: ಬಾಂಬೆ ಹೈಕೋರ್ಟ್ನ ಗೋವಾ ವಿಭಾಗೀಯ ಪೀಠವು 'ಬರ್ಚ್ ಬೈ ರೋಮಿಯೊ ಲೇನ್' ನೈಟ್ ಕ್ಲಬ್ ವಿರುದ್ಧದ ಸಿವಿಲ್ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ (ಪಿಐಎಲ್) ಪರಿವರ್ತಿಸಿದೆ.
ಡಿಸೆಂಬರ್ 6ರಂದು ಈ ನೈಟ್ಕ್ಲಬ್ನಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಮಂದಿ ಮೃತಪಟ್ಟಿದ್ದರು.
ನ್ಯಾಯಮೂರ್ತಿಗಳಾದ ಸಾರಂಗ್ ಕೊತ್ವಾಲ್ ಮತ್ತು ಪೃಥ್ವಿರಾಜ್ ಚವಾಣ್ ನೇತೃತ್ವದ ವಿಭಾಗೀಯ ನ್ಯಾಯಪೀಠವು, 'ಇಂಥ ಪ್ರಕರಣಗಳಲ್ಲಿ ಯಾರನ್ನಾದರೂ ಹೊಣೆ ಮಾಡಲೇಬೇಕಿದೆ' ಎಂದು ಅದು ತಿಳಿಸಿದೆ.
ಇದೇ ವೇಳೆ, ದುರಂತ ಸಂಭವಿಸಿದ ನೈಟ್ಕ್ಲಬ್ಗೆ ನೀಡಿದ್ದ ಪರವಾನಗಿ ಪ್ರಕ್ರಿಯೆ ಕುರಿತು ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರವನ್ನು ಕೇಳಿದೆ. ಬಳಿಕ ನ್ಯಾಯಾಲಯವು ಜನವರಿ 8ಕ್ಕೆ ವಿಚಾರಣೆಯನ್ನು ಮುಂದೂಡಿತು.

