HEALTH TIPS

ಪೆರಿಯ ಜೋಡಿ ಕೊಲೆ ಆರೋಪಿಗಳಿಗೆ ಸಾಮೂಹಿಕ ಪೆರೋಲ್ ಮಂಜೂರು: ಎಲ್‍ಡಿಎಫ್ ಸರ್ಕಾರ ಕೆಳಗಿಳಿಯುವ ಮುನ್ನ ಧಾವಂತದ ನಿರ್ಧಾರ

ಕಾಸರಗೋಡು: ಪೆರಿಯ ಜೋಡಿ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜೈಲು ಇಲಾಖೆ ಸಾಮೂಹಿಕ ಪೆರೋಲ್ ನೀಡಿದೆ. ಮೊದಲ ಆರೋಪಿ ಪೀತಾಂಬರನ್, ನಾಲ್ಕನೇ ಆರೋಪಿ ಅನಿಲ್, ಐದನೇ ಆರೋಪಿ ಗಿಜಿನ್, ಏಳನೇ ಆರೋಪಿ ಅಶ್ವಿನ್ ಮತ್ತು ಹದಿನೈದನೇ ಆರೋಪಿ ಸುರೇಂದ್ರನ್‍ಗೆ ಪೆರೋಲ್ ನೀಡಲಾಗಿದೆ. ಎಲ್‍ಡಿಎಫ್ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಮುನ್ನ ಪೆರೋಲ್ ನೀಡಲು ಆತುರಪಡುತ್ತಿತ್ತು. 


20 ದಿನಗಳ ಪೆರೋಲ್ ಪಡೆದ ಅವರೆಲ್ಲರೂ ಪ್ರಸ್ತುತ ಕಾಸರಗೋಡು ಜಿಲ್ಲೆಯಲ್ಲಿದ್ದಾರೆ. ಫೆಬ್ರವರಿ 17, 2019 ರಂದು ಕಾಸರಗೋಡಿನ ಪೆರಿಯ ಕಲ್ಯಾಟ್‍ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್ ಲಾಲ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ಆರೋಪಿಗಳಾದ ಸಿಪಿಎಂ ಕಾರ್ಯಕರ್ತರಿಗೆ ಸಿಬಿಐ ವಿಶೇಷ ನ್ಯಾಯಾಲಯವು ಎರಡೆರಡು ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೊಲೆಯಾದ ಕೃಪೇಶ್ ಮತ್ತು ಶರತ್ ಲಾಲ್ ಅವರ ಕುಟುಂಬಗಳು ಮತ್ತು ಕಾಂಗ್ರೆಸ್ ನಾಯಕತ್ವವು ಆರೋಪಿಗಳಿಗೆ ನಿರಂತರವಾಗಿ ಪೆರೋಲ್ ನೀಡುವುದನ್ನು ತೀವ್ರವಾಗಿ ವಿರೋಧಿಸಿತ್ತು.

ಎಲ್‍ಡಿಎಫ್ ಸರ್ಕಾರ ತಮಗೆ ನ್ಯಾಯ ನಿರಾಕರಿಸುತ್ತಿದೆ ಮತ್ತು ಅತ್ಯಂತ ಗಂಭೀರ ಅಪರಾಧಿಗಳನ್ನು ರಕ್ಷಿಸುವಲ್ಲಿ ವಿಶೇಷ ಆಸಕ್ತಿ ತೋರಿಸುತ್ತಿದೆ ಎಂದು ಕುಟುಂಬ ಆರೋಪಿಸಿದೆ. ಈ ಪ್ರಕರಣದ ಆರೋಪಿಗಳಿಗೆ ಪೆರೋಲ್ ನೀಡಿರುವುದು ಈ ಹಿಂದೆ ಪ್ರಮುಖ ರಾಜಕೀಯ ವಿವಾದಗಳಿಗೆ ಕಾರಣವಾಗಿತ್ತು. ನಿರಂತರ ಪೆರೋಲ್ ನೀಡುವುದನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಸಂತ್ರಸ್ಥರ ಕುಟುಂಬಗಳು ನ್ಯಾಯಾಲಯದ ಮೊರೆ ಹೋಗಲು ಯೋಜಿಸುತ್ತಿವೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries