HEALTH TIPS

ಕಾಸರಗೋಡಿನ ಭಾನುವಾರದ ಮಾರುಕಟ್ಟೆಯಲ್ಲಿ ಭಾರಿ ಜನಸಂದಣಿ; ಬೆಲೆ ಅಗ್ಗ ಕಾರಣ

ಕಾಸರಗೋಡು : ಕಾಸರಗೋಡು ನಗರದ ಹಳೆಯ ಬಸ್ ನಿಲ್ದಾಣದಲ್ಲಿ ವಿವಿಧ ರೀತಿಯ ಎಲೆ ತರಕಾರಿಗಳಿಗಾಗಿ ಹೆಚ್ಚಿನ ಸಂಖ್ಯೆಯ ಜನರು ಭಾನುವಾರ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದು ಸಾಮಾನ್ಯವಾಗುತ್ತಿದೆ. ಈ ಮಾರುಕಟ್ಟೆಯು ರಜಾದಿನಗಳಲ್ಲಿ ಗ್ರಾಹಕರಿಗೆ ಸಾಮಾನ್ಯ ದಿನಗಳಲ್ಲಿ ಸ್ಥಳೀಯ ಮಾರುಕಟ್ಟೆಗಳಿಗಿಂತ ವಿಭಿನ್ನ ಅನುಭವವನ್ನು ನೀಡುತ್ತದೆ. 


ಕಾಸರಗೋಡಿನ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಎಲೆ ತರಕಾರಿಗಳು ಲಭ್ಯವಿರುವುದಿಲ್ಲ. ಭಾನುವಾರ ಮಾರುಕಟ್ಟೆಯಲ್ಲಿ ಅಸಾಮಾನ್ಯ ಜನಸಂದಣಿಗೆ ಅದು ಮುಖ್ಯ ಕಾರಣವಾಗಿದೆ. ಈ ವಿಶೇಷ ಮಾರುಕಟ್ಟೆಯ ಹಿಂದೆ ವಿವಿಧ ರಾಜ್ಯಗಳ ವ್ಯಾಪಾರಿಗಳು ಕೆಲಸ ಮಾಡುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಅಗ್ಗ ವಸ್ತುಗಳು: 

ಇತರ ತರಕಾರಿಗಳ ಬೆಲೆಗಳು ಇಲ್ಲಿ ಸಾಮಾನ್ಯ ಮಾರುಕಟ್ಟೆಗಿಂತ ಒಂದರಿಂದ ಮೂರು ರೂಪಾಯಿ ಕಡಿಮೆ ಇದೆ. ಉದಾಹರಣೆಗೆ, ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ 33 ರೂ. ಆದರೆ ಭಾನುವಾರದ ಮಾರುಕಟ್ಟೆಯಲ್ಲಿ 25 ರಿಂದ 30 ರೂ.ಗಳಿಗೆ ಲಭ್ಯವಿರುತ್ತದೆ. ಮತ್ತೊಂದೆಡೆ, ಟೊಮೆಟೊ, ಹಸಿ ಮೆಣಸು, ಆಲೂಗಡ್ಡೆ, ಶುಂಠಿ, ಸೌತೆಕಾಯಿ, ಬೆಂಡೆಕಾಯಿ, ಕ್ಯಾರೆಟ್, ಎಲೆಕೋಸು, ಗೆಣಸು ಮತ್ತು ನಿಂಬೆಹಣ್ಣುಗಳ ಬೆಲೆ 1 ರಿಂದ 3 ರೂ.ಗಳಷ್ಟು ಕಡಿಮೆಯಾಗಿರುತ್ತದೆ. 

ಗ್ರಾಹಕರು ಮುಖ್ಯವಾಗಿ ಭಾನುವಾರದ ಮಾರುಕಟ್ಟೆಯನ್ನು ಉತ್ಸಾಹದಿಂದ ಅವಲಂಬಿಸಿದ್ದಾರೆ. ಎಲೆಗಳ ತರಕಾರಿಗಳು ಕಟ್ಟಿಗೆ 10 ರೂ.ಗಳಿಗೆ ಲಭ್ಯವಿದೆ. ಇದರೊಂದಿಗೆ, ಇತರ ತರಕಾರಿಗಳನ್ನು ಖರೀದಿಸುವುದರಿಂದ ಆರ್ಥಿಕವಾಗಿಯೂ ಲಾಭದಾಯವಾಗುತ್ತದೆ ಎಂದು ಗ್ರಾಹಕರು ಹೇಳುತ್ತಾರೆ.

ಪಾರ್ಕಿಂಗ್ ಸವಾಲು:

ಅಗ್ಗದ ಬೆಲೆಗೆ ತರಕಾರಿ ಸಹಿತ ವಸ್ತುಗಳು ಲಭ್ಯವಿರುವ ಕಾರಣ ತಂಡೋಪತಮಡವಾಗಿ ಆಗಮಿಸುವ ಜನರ ಪ್ರಾಥಮಿಕ ಅಗತ್ಯಗಳಿಗೆ ಇಲ್ಲಿ ಸೌಲಭ್ಯಗಳಿಲ್ಲ. ವಾಹನ ಪಾರ್ಕಿಂಗ್, ಶೌಚಾಲಯ, ಶುದ್ಧ ಕುಡಿಯುವ ನೀರಿನ ಸೌಕರ್ಯಗಳು ಅಗತ್ಯವಿದೆ. ಇದರಲ್ಲೂ ಪಾರ್ಕಿಂಗ್ ಅಸೌಕರ್ಯದಿಂದ ಭಾರೀ ಟ್ರಾಫಿಕ್ ಒತ್ತಡ ಉಂಟಾಗುತ್ತಿದೆ. ಇದು ಬಹಳ ಹೊತ್ತು ಕಾಯುವಿಕೆಗೆ ಕಾರಣವಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕೃತರು ತುರ್ತು ಕ್ರಮಕ್ಕೆ ಮುಂದಾಗಬೇಕು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries