HEALTH TIPS

ನಿವೃತ್ತ ಏರ್‌ ಮಾರ್ಷಲ್‌ ಈಗ ರಾಮಮಂದಿರದ ಸಿಇಒ: ಜಿತೇಂದ್ರ ಮಿಶ್ರಾ ಹಿನ್ನೆಲೆ ಏನು?

ಅಯೋಧ್ಯೆ: 'ಆಪರೇಷನ್‌ ಸಿಂಧೂರ'ದ ವೇಳೆ ಪಶ್ಚಿಮ ವಾಯು ಕಮಾಂಡ್‌ನ ನೇತೃತ್ವ ವಹಿಸಿದ್ದ ನಿವೃತ್ತ ಏರ್‌ ಮಾರ್ಷಲ್‌ ಜಿತೇಂದ್ರ ಮಿಶ್ರಾ ಅವರು 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌'ನ ಮೊದಲ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಬುಧವಾರ ನೇಮಕಗೊಂಡಿದ್ದಾರೆ.


ಒಟ್ಟು ಸಲ್ಲಿಕೆಯಾಗಿದ್ದ 5,585 ಅರ್ಜಿಗಳ ಪೈಕಿ ಅಂತಿಮಗೊಳಿಸಲಾದ ಮೂವರು ಅಭ್ಯರ್ಥಿಗಳಲ್ಲಿ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ರಾಮಮಂದಿರಕ್ಕೆ ನೀಡಲಾದ ದೇಣಿಗೆ ದುರುಪಯೋಗದ ಆರೋಪಗಳಿಗೆ ಸಂಬಂಧಿಸಿದ ವಿವಾದದ ಕಾರಣದಿಂದಾಗಿ ಈ ನೇಮಕಾತಿ ನಡೆದಿದೆ. ಈ ವಿವಾದವು ಎಂಟು ಮಂದಿಯ ಬಂಧನ ಮತ್ತು ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಅವರ ರಾಜೀನಾಮೆಗೆ ಕಾರಣವಾಗಿತ್ತು.

ಸಿಇಒ ನೇಮಕಕ್ಕಾಗಿ ನಿವೃತ್ತ ನ್ಯಾಯಮೂರ್ತಿ ಪ್ರಮೋದ್‌ ಕೊಹ್ಲಿ ಅವರ ನೇತೃತ್ವದಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ವಿಷ್ಣುಕಾಂತ್‌ ಚತುರ್ವೇದಿ, ವಿಜ್ಞಾನಿ ಸುರೇಶ್‌ ಹವಾರೆ ಸದಸ್ಯರಾಗಿದ್ದರು. ಈ ಸಮಿತಿಯು ಮಂಗಳವಾರ ತನ್ನ ಅಂತಿಮ ವರದಿಯನ್ನು ಸಲ್ಲಿಸಿತ್ತು.

ಜಿತೇಂದ್ರ ಮಿಶ್ರಾ ಅವರ ಹಿನ್ನೆಲೆ ಏನು?

ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯವರಾದ ಮಿಶ್ರಾ, ಭಾರತೀಯ ವಾಯುಪಡೆಯಲ್ಲಿ 39 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ ಮತ್ತು 'ಆಪರೇಷನ್ ಸಿಂಧೂರ'ದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.


ಸಿಇಒ ನೇಮಕಾತಿಗೆ ಕಾರಣವೇನು?

ದೇಣಿಗೆ ದುರುಪಯೋಗದ ಆರೋಪಗಳು ಮತ್ತು ಅದರಿಂದ ಉಂಟಾದ ವಿವಾದಗಳ ನಂತರ, ಟ್ರಸ್ಟ್‌ನ ಆಡಳಿತವನ್ನು ವ್ಯವಸ್ಥಿತಗೊಳಿಸಲು ಈ ನೇಮಕಾತಿಯನ್ನು ಮಾಡಲಾಗಿದೆ.


ಸಿಇಒ ಅವರ ಜವಾಬ್ದಾರಿಗಳೇನು?

ಸಿಇಒ ಆಗಿ ಮಿಶ್ರಾ ಅವರು ದೈನಂದಿನ ಆಡಳಿತ, ಭಕ್ತರ ಸೌಲಭ್ಯಗಳು, ಹಣಕಾಸು ನಿರ್ವಹಣೆ, ಭದ್ರತೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ.


ಆಯ್ಕೆ ಪ್ರಕ್ರಿಯೆ ಹೇಗಿತ್ತು?

ಒಟ್ಟು 5,585 ಅರ್ಜಿಗಳನ್ನು ಸ್ವೀಕರಿಸಿ, ಎಐ (AI) ಮತ್ತು ಮಾನವ ಪರಿಶೀಲನೆಯ ಮೂಲಕ ಅರ್ಹ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಮುಖ ಅಂಕಿಅಂಶಗಳು

5,585ಒಟ್ಟು ಸಲ್ಲಿಕೆಯಾದ ಅರ್ಜಿಗಳು39 ವರ್ಷಸೇವಾ ಅವಧಿ16ಅಂತಿಮ ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು2026ರ ಏಪ್ರಿಲ್ 30ಸೇವಾ ನಿವೃತ್ತಿ ದಿನಾಂಕ

ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಯಾರೀ ಜಿತೇಂದ್ರ ಮಿಶ್ರಾ?

ಮಿಶ್ರಾ ಅವರು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಇವರು ಮೂಲತಃ ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಭೋಪತ್‌ಪುರ ಗ್ರಾಮದವರು. ಇದು ಅಯೋಧ್ಯೆಯಿಂದ ರಸ್ತೆ ಮಾರ್ಗವಾಗಿ ಸುಮಾರು ಮೂರು ಗಂಟೆಗಳ ಪ್ರಯಾಣದ ದೂರದಲ್ಲಿದೆ. ಇವರ ತಂದೆ ವೃತ್ತಿಯಲ್ಲಿ ಉಪನ್ಯಾಸಕರು.

ಆಪರೇಷನ್ ಸಿಂಧೂರ-ಪಶ್ಚಿಮ ವಾಯು ಕಮಾಂಡ್‌ನ ನೇತೃತ್ವ:

ಮಿಶ್ರಾ ಅವರು 'ಆಪರೇಷನ್‌ ಸಿಂಧೂರ'ದ ವೇಳೆ ಪಶ್ಚಿಮ ವಾಯು ಕಮಾಂಡ್‌ನ ನೇತೃತ್ವ ವಹಿಸಿದ್ದರು. 'ಆಪರೇಷನ್‌ ಸಿಂಧೂರ'ದಲ್ಲಿ ನಿರ್ವಹಿಸಿದ ಪಾತ್ರಕ್ಕಾಗಿ 'ಸರ್ವೋತ್ತಮ ಯುದ್ಧ ಸೇವಾ ಪದಕ' ಪಡೆದಿದ್ದಾರೆ. ಸುದೀರ್ಘ ಸೇನಾ ವೃತ್ತಿಜೀವನದಲ್ಲಿ ಅವರು 'ಅತಿ ವಿಶಿಷ್ಟ ಸೇವಾ ಪದಕ', 'ವಿಶಿಷ್ಟ ಸೇವಾ ಪದಕ'ಗಳನ್ನೂ ಪಡೆದಿದ್ದಾರೆ.

39 ವರ್ಷಗಳ ಸುದೀರ್ಘ ಸೇವೆ:

1986ರ ಡಿಸೆಂಬರ್‌ 6ರಂದು ಭಾರತೀಯ ವಾಯುಪಡೆಗೆ 'ಫೈಟರ್‌ ಪೈಲಟ್‌' ಆಗಿ ಸೇರಿದ ಮಿಶ್ರಾ ಅವರು 2026ರ ಏಪ್ರಿಲ್‌ 30ರಂದು ನಿವೃತ್ತರಾದರು. ಒಟ್ಟು 39 ವರ್ಷಗಳಿಗೂ ಹೆಚ್ಚುಕಾಲ ಸೇವೆ ಸಲ್ಲಿಸಿದ್ದಾರೆ.

ಮಿಶ್ರಾ ಅವರು ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ, ಬೆಂಗಳೂರಿನ ಏರ್‌ಫೋರ್ಸ್‌ ಟೆಸ್ಟ್‌ ಪೈಲಟ್ಸ್‌ ಸ್ಕೂಲ್‌, ಅಮೆರಿಕದ ಏರ್‌ ಕಮಾಂಡ್‌ ಆಯಂಡ್‌ ಸ್ಟಾಫ್‌ ಕಾಲೇಜು, ಬ್ರಿಟನ್‌ನ ರಾಯಲ್‌ ಕಾಲೇಜ್‌ ಆಫ್‌ ಡಿಫೆನ್ಸ್‌ ಸ್ಟಡೀಸ್‌ನ ಹಳೆಯ ವಿದ್ಯಾರ್ಥಿ.

ಸೇವಾ ಅನುಭವ ಮತ್ತು ಗೌರವ:

3,000 ಗಂಟೆಗಳಿಗೂ ದೀರ್ಘಕಾಲದ ಹಾರಾಟದ ಅನುಭವ ಹೊಂದಿರುವ ಅವರು 'ಫೈಟರ್‌ ಸ್ಕ್ವಾಡ್ರನ್‌' ಮತ್ತು ಎರಡು ಮುಂಚೂಣಿ ವಾಯುನೆಲೆಗಳ ನೇತೃತ್ವ ವಹಿಸಿದ್ದರು. ವಾಯುಪಡೆಯ ಪ್ರಧಾನ ಕಚೇರಿಯಲ್ಲಿ 'ಆಪರೇಷನ್‌ ಪ್ಲ್ಯಾನಿಂಗ್‌ ಆಯಂಡ್‌ ಅಸೆಸ್‌ಮೆಂಟ್‌ ಗ್ರೂಪ್‌'ನ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಇವರ ಸೇವೆಯನ್ನು ಪರಿಗಣಿಸಿ ಸರ್ವೋತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಹಾಗೂ ವಿಶಿಷ್ಟ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗಿದೆ.

ಟ್ರಸ್ಟ್‌ನ ಪ್ರಮುಖ ಬದಲಾವಣೆಗಳು:

ದೇಣಿಗೆ ದುರುಪಯೋಗದ ಆರೋಪದ ಮೇಲೆ ಚಂಪತ್ ರಾಯ್ ಅವರು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿದ ನಂತರ, ಸ್ವಾಮಿ ಗೋವಿಂದ್ ದೇವಗಿರಿ ಅವರನ್ನು ಟ್ರಸ್ಟ್‌ನ ನೂತನ ಪೂರ್ಣಕಾಲಿಕ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಮಹೇಶ್ ಭಾಗಚಂದ್ಕಾ ಅವರನ್ನು ನೂತನ ಖಜಾಂಚಿಯಾಗಿ ನೇಮಿಸಲಾಗಿದೆ.

ರಾಮಮಂದಿರ ಸಿಇಒ ಆಗಿ ಇವರ ಜವಾಬ್ದಾರಿಗಳೇನು?

ಸಿಇಒ ಆಗಿ ಜಿತೇಂದ್ರ ಮಿಶ್ರಾ ಅವರು ಟ್ರಸ್ಟ್‌ನ ದೈನಂದಿನ ಆಡಳಿತಾತ್ಮಕ ಉಸ್ತುವಾರಿಯನ್ನು ನೋಡಿಕೊಳ್ಳಲಿದ್ದಾರೆ. ಭಕ್ತರಿಗೆ ಅಗತ್ಯ ಸೌಲಭ್ಯಗಳ, ಹಣಕಾಸಿನ ಆಡಳಿತ, ಸಿಬ್ಬಂದಿ ನಡುವಿನ ಸಮನ್ವಯ, ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆ ಇವರ ಮುಖ್ಯ ಜವಾಬ್ದಾರಿಗಳಾಗಿರಲಿವೆ.

ಕಾರ್ಗಿಲ್ ಯುದ್ಧದಲ್ಲೂ ಪ್ರಮುಖ ಪಾತ್ರ:

ಕಾರ್ಗಿಲ್ ಯುದ್ಧದ ಸಮಯದಲ್ಲಿ ಮಿರಾಜ್ 2000 ಯುದ್ಧ ವಿಮಾನಗಳಲ್ಲಿ 'ಲೇಸರ್ ಮಾರ್ಗದರ್ಶಿತ ಬಾಂಬ್‌ಗಳನ್ನು' ಅಳವಡಿಸಿ ಕಾರ್ಯಾಚರಣೆಗೆ ಇಳಿಸಿದ ತಂಡದಲ್ಲಿ ಇವರು ಸ್ಕ್ವಾಡ್ರನ್ ಲೀಡರ್ ಆಗಿದ್ದರು.

ಅಲ್ಲದೇ 2010 ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ವಾಯುಪಡೆ ಸಮರಾಭ್ಯಾಸದಲ್ಲಿ (ಗರುಡ IV) ಭಾರತೀಯ ತಂಡದ ಪರವಾಗಿ ಭಾಗವಹಿಸಿದ್ದರು.

ಆಯ್ಕೆ ಪ್ರಕ್ರಿಯೆ ಹೇಗಿತ್ತು:

ಅಭ್ಯರ್ಥಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಪರಿಶೀಲನೆ ಮತ್ತು ಮಾನವ ಪರಿಶೀಲನೆ ನಡೆಸಲಾಯಿತು. 5,585 ಅಭ್ಯರ್ಥಿಗಳ ಪೈಕಿ 3,577 ಅಭ್ಯರ್ಥಿಗಳು 600 ಅಂಕಗಳ ಮಾನದಂಡದಡಿ ಮೌಲ್ಯಮಾಪನಕ್ಕಾಗಿ ವಿವರಗಳನ್ನು ಸಲ್ಲಿಸಿದ್ದರು. ಈ ಪೈಕಿ 470 ಅಥವಾ ಅದಕ್ಕಿಂತ ಹೆಚ್ಚು ಅಂಕಗಳಿಸಿದ 108 ಅಭ್ಯರ್ಥಿಗಳನ್ನು ವರ್ಚುವಲ್‌ ಸಂವಾದಕ್ಕೆ ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಅಯೋಧ್ಯೆಯಲ್ಲಿ ಆಗಸ್ಟ್‌ 11 ಮತ್ತು 12ರಂದು 16 ಅಭ್ಯರ್ಥಿಗಳ ಸಂದರ್ಶನ ನಡೆಯಿತು ಎಂದು ಮೂಲಗಳು ವಿವರಿಸಿವೆ.

ಅಭ್ಯರ್ಥಿಗಳ ನಾಯಕತ್ವದ ಗುಣ, ನಿರ್ವಹಣಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ದೂರದೃಷ್ಟಿ ಕುರಿತು ಮೌಲ್ಯಮಾಪನ ಮಾಡಿದ ಬಳಿಕ ಮೂವರು ವೃತ್ತಿಪರರ ಹೆಸರನ್ನು ಸಿಇಒ ಹುದ್ದೆಗೆ ಶಿಫಾರಸು ಮಾಡಲಾಗಿತ್ತು ಎಂದು ಸಮಿತಿಯ ಕಾರ್ಯದರ್ಶಿ ಸಮೀರ್‌ ಪಾಂಡಾ ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries