HEALTH TIPS

ಯಾವುದೇ ಶೀರ್ಷಿಕೆಯಿಲ್ಲ

   ಸಹಕಾರಿ ವಿಚಾರಗೋಷ್ಠಿಯ ನಿರ್ವಹಣಾ ಸಮಿತಿ ರೂಪೀಕರಣ
   ಮಂಜೇಶ್ವರ: ರಾಜ್ಯಮಟ್ಟದ ಸಹಕಾರಿ ಸಪ್ತಾಹದ ಉದ್ಘಾಟನೆಯು ನ. 14 ರಂದು ಕಾಸರಗೋಡು ನಗರಸಭಾ ಸಭಾಂಗಣದಲ್ಲಿ ನಡೆಯಲಿದ್ದು,ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ, ಕಂದಾಯ ಸಚಿವ ಇ.ಚಂದ್ರಶೇಖರನ್, ಸಹಕಾರಿ ಸಚಿವ ಕಡಗಂಪಳ್ಳಿ ಸುರೇಂದ್ರನ್, ಶಾಸಕ ಓ.ರಾಜಗೋಪಾಲ್ ಮೊದಲಾದವರು ಭಾಗವಹಿಸುವರು. ಕಾರ್ಯಕ್ರಮದ ಅಂಗವಾಗಿ ನ.18 ರಂದು ಬೆಳಿಗ್ಗೆ 10ಕ್ಕೆ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕಿನ ಸಭಾಂಗಣದಲ್ಲಿ ಸಹಕಾರಿ ಯೋಜನೆಗಳ ವಿವಿಧ ಅನುಕೂಲಗಳು ಮತ್ತು ಅನುಷ್ಠಾನದೊಂದಿಗೆ ಆದಾಯ ವರ್ಧನೆ ಎಂಬ ವಿಚಾರಗೋಷ್ಠಿ ಏರ್ಪಡಿಸಲಾಗಿದೆ.
   ರಾಜ್ಯದ ಪ್ರಸಿದ್ದ ಸಹಕಾರಿ ತಜ್ಞ ಝಾಕೀರ್ ಹುಸೈನ್ ವಿಚಾರಗೋಷ್ಠಿ ನಡೆಸುವರು. ಸಹಕಾರಿ ಸಂಘದ ಹೆಚ್ಚುವರಿ ರಿಜಿಸ್ಟಾರ್ ವಿ.ಮೊಹಮ್ಮದ್ ನೌಶೀದ್ ಉದ್ಘಾಟಿಸುವರು. ಎ.ಆರ್.ಮುರಳೀ ಉಪಸ್ಥಿತರಿರುವರು.
   ಕಾರ್ಯಕ್ರಮದ ಯಶಸ್ವಿಗಾಗಿ ಇತ್ತೀಚೆಗೆ ಸಂಘಟನಾ ಸಮಿತಿ ಮಜಿಬೈಲ್ ಬ್ಯಾಂಕ್ ಸಭಾಂಗಣದಲ್ಲಿ ರೂಪೀಕರಿಸಲಾಯಿತು. ಸಂಘಟನಾ ಸಮಿತಿ ರೂಪೀಕರಣ ಸಭೆಯನ್ನು ಸಹಕಾರಿ ಸಹಾಯಕ ರಿಜಿಸ್ಟಾರ್ ರಾಜಗೋಪಾಲನ್ ಉದ್ಘಾಟಿಸಿದರು. ಬಿ.ಎಂ. ಅನಂತ ಅಧ್ಯಕ್ಷತೆ ವಹಿಸಿದ್ದರು. ಸಹಕಾರಿ ಅಧಿಕಾರಿ ಸತೀಶನ್ ಕೆ.ಸಿ, ಎಂ.ಗೋವಿಂದ ಹೆಗ್ಡೆ, ಎಂ.ಸಂಜೀವ ಶೆಟ್ಟಿ, ಅರ್ಬನ್ ಬ್ಯಾಂಕಿನ ಅಧ್ಯಕ್ಷ ಕೆ.ಆರ್.ಜಯಾನಂದ ಉಪಸ್ಥಿತರಿದ್ದರು.
   ಸಂಘಟನಾ ಸಮಿತಿ ಅಧ್ಯಕ್ಷರಾಗಿ ಕೆ.ಆರ್.ಜಯಾನಂದ, ಉಪಾಧ್ಯಕ್ಷರಾಗಿ ಮಜಿಬೈಲ್ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದ ಹೆಗ್ಡೆ, ಸಂಚಾಲಕರಾಗಿ ರಾಮಕೃಷ್ಣ ಕಡಂಬಾರ್, ಸಹಾಯಕ ಸಂಚಾಲಕರಾಗಿ ರಾಜನ್ ನಾಯರ್ ರವರನ್ನು ಆಯ್ಕೆಮಾಡಲಾಯಿತು. ರಾಮಕೃಷ್ಣ ಕಡಂಬಾರ್ ಸ್ವಾಗತಿಸಿ, ಸಹಕಾರಿ ಪರಿವೀಕ್ಷಕ ಸತೀಶನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries