HEALTH TIPS

ಕಾಸರಗೋಡು ಚಿನ್ನಾ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನ-ದೇಶದ ಸಂಸ್ಕøತಿ ವಿಶ್ವದಲ್ಲೇ ಶ್ರೇಷ್ಠ : ನ್ಯಾಯಮೂರ್ತಿ. ಎಂ.ಎನ್.ವೆಂಕಟಾಚಲಯ್ಯ

           
      ಬೆಂಗಳೂರು: ಕಲೆ, ಸಾಹಿತ್ಯ ಹಾಗೂ ರಂಗಭೂಮಿ ದೇಶದ ವೈವಿಧ್ಯತೆ ಕಾಪಾಡುವ ಪ್ರಮುಖ ಅಸ್ತ್ರಗಳಾಗಿವೆ ಎಂದು ಸರ್ವೋಚ್ಛ ನ್ಯಾಯಲಯದ ನಿವೃತ್ತ  ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹೇಳಿದರು.
         ಬೆಂಗಳೂರಿನ ಎ.ಡಿ.ಎ. ರಂಗಮಂದಿರದಲ್ಲಿ ಅಜಿತ್‍ಕುಮಾರ್ ಸ್ಮಾರಕ ಸಾಂಸ್ಕøತಿಕ ವೇದಿಕೆ ಇತ್ತೀಚೆಗೆ ಆಯೋಜಿಸಿದ ರಾಷ್ಟ್ರಮಟ್ಟದ `ಅಜಿತಶ್ರೀ' ಹಾಗೂ `ನಾಟ್ಯಶ್ರೀ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
    ದೇಶದ ಸಂಸ್ಕøತಿ ವಿಶ್ವದಲ್ಲೇ ಶ್ರೇಷ್ಠವಾಗಿದೆ. ವೈವಿಧ್ಯತೆಯಿಂದ ಕೂಡಿರುವ ಭಾರತದ ಪರಂಪರೆಯಲ್ಲಿ ಕಲೆ, ಸಾಹಿತ್ಯ, ರಂಗಭೂಮಿ ಬಹಳ ವರ್ಷಗಳಿಂದ  ನಡೆದುಕೊಂಡು ಬಂದಿದೆ. ಸಂವಿಧಾನ ರಚನಕಾರರು ಈ ಎಲ್ಲಾ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಉತ್ತಮವಾದ ಸಂವಿಧಾನವನ್ನು ಭಾರತಕ್ಕೆ ನೀಡಿದ್ದಾರೆ. ಇದು ಅವಿಸ್ಮರಣೀಯ ಹಾಗೂ ಅನನ್ಯ ಎಂದರು.
       2019ನೇ ಜೀವಮಾನ ಸಾಧನೆ `ಅಜಿತಶ್ರೀ' ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಂಗಕರ್ಮಿ, ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಪ್ರಾಂತ್ಯ ಪ್ರಚಾರಕ ಹಾಗೂ ಯೋಗ ಗುರುವಾಗಿರುವ ಅಜಿತ್‍ಕುಮಾರ್‍ರವರ ಹೆಸರಲ್ಲಿ ನೀಡಲಾಗುತ್ತಿರುವ
     ಈ ಪ್ರಶಸ್ತಿ ಸ್ವೀಕರಿಸುತ್ತಿರುವ ತನ್ನ ಕೆಲಸಕ್ಕೆ ಮತ್ತಷ್ಟು ಸೂರ್ತಿ ನೀಡಲಿದೆಯೆಂದರಲ್ಲದೆ, ಸಮಿತಿಯವರು ನೀಡಿದ 50,000 ರೂ. ಮೊತ್ತವನ್ನು ಅಶಕ್ತ ಕಲಾವಿದರಿಗೆ, ಸಾಂಸ್ಕøತಿಕ, ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ
ಮಾಡುತ್ತಿರುವವರಿಗೆ ನೀಡಲಾಗುವುದು ಎಂದರು.
     ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಮಾತನಾಡಿ ಉನ್ನತ ಶಿಕ್ಷಣ ಪಡೆಯುವುದಕ್ಕಿಂತ ರಂಗಭೂಮಿಯಲ್ಲಿ ಶ್ರಮಿಸುವುದು ಉತ್ತಮ. ಉತ್ತಮ ಶಿಕ್ಷಣದಿಂದ ಕೇವಲ ಹಣಗಳಿಸಬಹುದು. ರಂಗಭೂಮಿ ಹಾಗೂ ಕಲೆಯಿಂದ ವೈಯಕ್ತಿಕ ಹಾಗೂ ಸಾರ್ವಜನಿಕವಾಗಿಯೂ ಘನತೆ, ಗೌರವ ಪಡೆಯ
ಬಹುದೆಂದರು.
    ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರು, ಕುಟುಂಬ ಪ್ರಭೋದನ್ ಸು.ರಾಮಣ್ಣ ಅವರು ಅಜಿತ್‍ಕುಮಾರ್ ಅವರ ಸಂಸ್ಮರಣೆಯನ್ನು ಮಾಡುತ್ತ ಅವರಲ್ಲಿರುವ ನಿಷ್ಠೆ, ಆತ್ಮ ಸಮರ್ಪಣೆ, ನಿಶ್ಚಿತತೆ, ಪರಿಪೂರ್ಣತೆ ಬಗ್ಗೆ ಹೇಳಿದರು.
ಈ ಸಂದರ್ಭದಲ್ಲಿ 2019ನೇ ಸಾಲಿನ `ನಾಟ್ಯಶ್ರೀ' ಪ್ರಶಸ್ತಿಯನ್ನು ಭರತನಾಟ್ಯ ಕಲಾವಿದೆ ಡಾ|ತುಳಸಿ ರಾಮಚಂದ್ರ, ಸಂಗೀತ ವಿದ್ವಾಂಸ ವಿದ್ವಾನ್ ಎಸ್.ಶಂಕರ್, ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ್ ಅವರಿಗೆ, ಜೀವಮಾನ ಸಾಧನೆ ರಾಷ್ಟ್ರೀಯ `ಅಜಿತಶ್ರೀ' ಪ್ರಶಸ್ತಿಯನ್ನು ರಂಗಭೂಮಿಯ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಅವರಿಗೆ ನೀಡಿ ಗೌರವಿಸಲಾಯಿತು.
ಖ್ಯಾತ ಕವಿ, ಸಾಹಿತಿ, ಡಾ|ಹೆಚ್.ಎಸ್.ವೆಂಕಟೇಶಮೂರ್ತಿ, ಅಜಿತ್‍ಕುಮಾರ್ ಸ್ಮಾರಕ ಸಾಂಸ್ಕøತಿಕ ವೇದಿಕೆಯ ಅಧ್ಯಕ್ಷ ಡಾ|ಬಿ.ಎಲ್.ಶಂಕರ್, ರಂಗಕರ್ಮಿ ಶ್ರೀನಿವಾಸ ಮೇಷ್ಟ್ರು ಉಪಸ್ಥಿತರಿದ್ದರು.
   ಡಾ.ಬಿ.ಎಲ್.ಶಂಕರ್ ಸ್ವಾಗತಿಸಿದರು. ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷರೂ, ರಂಗನಿರ್ದೇಶಕರೂ ಆಗಿರುವ ಡಾ|ಬಿ.ವಿ.ರಾಜರಾಂ ಕಲಾವಿದರನ್ನು ಪರಿಚಯಿಸಿದರು. ಸಂಸ್ಥೆಯ ಪ್ರಧಾನ ಸಂಚಾಲಕರಾದ ಮುರಳೀಧರ್ (ಯೋಗ ಮುರಳಿ) ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುಂಚಿತವಾಗಿ ಐಶ್ವರ್ಯ ನಿತ್ಯಾನಂದ ಅವರಿಂದ ಭರತನಾಟ್ಯ ಪ್ರದರ್ಶಿಸಲ್ಪಟ್ಟಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries