HEALTH TIPS

ಕೂಡ್ಲು ಮೇಳದ ಪ್ರಥಮ ಸೇವೆಯಾಟ ಇಂದು


        ಮಧೂರು: ಕುತ್ಯಾಳ ಶ್ರೀ ಗೋಪಾಲಕೃಷ್ಣ ನಾಟಕ ಸಭಾ ಕೂಡ್ಲು ಮೇಳದ ಈ ವರ್ಷದ ತಿರುಗಾಟದ ಪ್ರಥಮ ಸೇವೆಯಾಟ ಡಿ.20 ರಂದು ನಡೆಯಲಿದೆ. ಪಾಂಡವಾಶ್ವಮೇಧ(ಕಾಲ ಮಿತಿ) ಪ್ರಸಂಗದ ಯಕ್ಷಗಾನ ಬಯಲಾಟ ಜರಗಲಿದೆ. ಡಿ.21 ರಂದು ರಾತ್ರಿ 9.30 ಕ್ಕೆ ಶ್ರೀ ಕ್ಷೇತ್ರದಲ್ಲಿ `ನಳದಮಯಂತಿ, ಜಾಂಬವತಿ ಪರಿಣಯ' ಪ್ರಸಂಗದ ಯಕ್ಷಗಾನ ಬಯಲಾಟ ನಡೆಯುವುದು.
      ತೆಂಕುತಿಟ್ಟಿನ ಅತಿ ಪ್ರಾಚೀನ ಮೇಳವಾದ ಕೂಡ್ಲು ಮೇಳ ಹಿಂದೆ ದಿಗ್ಗಜ ಕಲಾವಿದರನ್ನು ಕಲಾಕ್ಷೇತ್ರಕ್ಕೆ ಪರಿಚಯಿಸುವಲ್ಲಿ ಪ್ರಸಿದ್ದವಾಗಿತ್ತು. ಅಲ್ಪ ಸಮಯ ಪ್ರದರ್ಶನಗಳನ್ನು ನಿಲ್ಲಿಸಿದ್ದ ಮೇಳ ಕಳೆದ ಕೆಲವು ವರ್ಷಗಳಿಂದ ಸಾಂಪ್ರದಾಯಿಕ ಪ್ರದರ್ಶನಗಳಿಂದ ಮತ್ತೆ ಸಕ್ರಿಯವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries