HEALTH TIPS

ಅಯ್ಯಪ್ಪ ಭಕ್ತರಿಗೆ ಕಣಜಗಳ ಕಾಟ; ಹೈಕೋರ್ಟ್‍ನಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು


                     ಪತ್ತನಂತಿಟ್ಟ: ಶಬರಿಮಲೆ ಕಾನನಪಥದಲ್ಲಿ ಯಾತ್ರಾರ್ಥಿಗಳ ಮೇಲೆ ಕಣಜ ಕುಟುಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣವನ್ನು ಕೈಗೆತ್ತಿಕೊಂಡಿದೆ.
             ಘಟನೆಯ ಕುರಿತು ಪತ್ತನಂತಿಟ್ಟ ಜಿಲ್ಲಾಧಿಕಾರಿಯಿಂದ ವರದಿ ಕೇಳಲಾಗಿದೆ. ವರದಿ ಸಲ್ಲಿಸುವಂತೆ ದೇವಸ್ವಂ ಪೀಠ ಆದೇಶಿಸಿದೆ.
         ನಿನ್ನೆ ಪಂಪಾದಿಂದ ಸನ್ನಿಧಾನಂವರೆಗಿನ ಸ್ವಾಮಿ ಅಯ್ಯಪ್ಪನ ಕಾನನ ಪಥದಲ್ಲಿ ಕಣಜಗಳ ದಾಳಿ ನಡೆದಿತ್ತು. ಕಣಜ ದಾಳಿಗೆ 17 ಅಯಪ್ಪ ಭಕ್ತರು ಸಂತ್ರಸ್ಥತೆಗೊಳಗಾದರು.  ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಣಜಗಳ ದಾಳಿಯ ನಂತರ ಸ್ವಾಮಿ ಅಯ್ಯಪ್ಪನ್ ರಸ್ತೆ ಮೂಲಕ ಯಾತ್ರಾರ್ಥಿಗಳಿಗೆ ತೆರಳದಂತೆ ತಡೆಯಲಾಗಿದೆ. ಗಾಯಗೊಂಡ ಯಾತ್ರಾರ್ಥಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಪೈಂಕುಣಿ ಉತ್ರಂ ಹಬ್ಬಕ್ಕಾಗಿ ಶಬರಿಮಲೆಯನ್ನು ತೆರೆದ ಹಿನ್ನೆಲೆಯಲ್ಲಿ ಸಂಚರಿಸುವ ಯಾತ್ರಾರ್ಥಿಗಳ ಮೇಲೆ ಕಣಜದ ಹುಳಗಳ ದಾಳಿ ನಡೆದಿದೆ.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries