HEALTH TIPS

ಮಂಡಲ ಪೂಜೋತ್ಸವ: ಶಬರಿಮಲೆ ದರ್ಶನಕ್ಕೆ ವಿಶೇಷ ಸಂಚಾರಕ್ಕೆ ಸನ್ನದ್ದವಾದ ವಂದೇಭಾರತ್

                 ಎರ್ನಾಕುಳಂ: ಶಬರಿಮಲೆ ಯಾತ್ರೆಗೆ ಸಂಬಂಧಿಸಿದಂತೆ ವಂದೇಭಾರತ್ ಎಕ್ಸ್ ಪ್ರೆಸ್ ವಿಶೇಷ ಸೇವೆ ನಡೆಸಲು ಸಿದ್ಧತೆ ನಡೆಸಿದೆ.

                ವಂದೇಭಾರತ್ ವಿಶೇಷ ಸೇವೆಯು ಚೆನ್ನೈ - ಕೊಟ್ಟಾಯಂ - ಚೆನ್ನೈ ಮಾರ್ಗದಲ್ಲಿ ಸಂಚರಿಸಲಿದೆ. ಶುಕ್ರವಾರ ಮತ್ತು ಭಾನುವಾರದಂದು ವಿಶೇಷ ಸೇವೆಗಳನ್ನು ನಡೆಸಲಾಗುವುದು ಎಂದು ದಕ್ಷಿಣ ರೈಲ್ವೆ ತಿಳಿಸಿದೆ. ಡಿಸೆಂಬರ್ 15 ರಿಂದ 24 ರವರೆಗೆ ನಾಲ್ಕು ಸೇವೆಗಳನ್ನು ನಡೆಸಲಾಗುವುದು. ತಮಿಳುನಾಡಿನಿಂದ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾದ ಕಾರಣ ವಂದೇಭಾರತ್ ವಿಶೇಷ ರೈಲನ್ನು ಹೊರಡಿಸಲು ರೈಲ್ವೆ ನಿರ್ಧರಿಸಿದೆ.

               ಶಬರಿಮಲೆ ವಿಶೇಷ ವಂದೇಭಾರತ್ ಶುಕ್ರವಾರ ಮತ್ತು ಭಾನುವಾರದಂದು ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಬೆಳಿಗ್ಗೆ 8.30 ಕ್ಕೆ ಹೊರಟು ಸಂಜೆ 7 ಗಂಟೆಗೆ ಕೊಟ್ಟಾಯಂ ತಲುಪುತ್ತದೆ. . ವಂದೇಭಾರತ್ ಸ್ಪೆಷಲ್ ಕೊಟ್ಟಾಯಂನಿಂದ ರಾತ್ರಿ 9 ಗಂಟೆಗೆ ಹೊರಡುತ್ತದೆ ಮತ್ತು ಮರುದಿನ ಬೆಳಿಗ್ಗೆ 9 ಗಂಟೆಗೆ ಚೆನ್ನೈ ನಿಲ್ದಾಣವನ್ನು ತಲುಪುತ್ತದೆ. ವಿಶೇಷ ರೈಲು ಕೇರಳದ ಪಾಲಕ್ಕಾಡ್ ತ್ರಿಶೂರ್ ಮತ್ತು ಎರ್ನಾಕುಳಂನಲ್ಲಿ ನಿಲುಗಡೆ ಹೊಂದಿದೆ. ಪೆÇತ್ತನ್ನೂರು, ಈರೋಡ್, ಸೇಲಂ, ಜೋಲಾರ್‍ಪೇಟ್ಟೈ ಮತ್ತು ಕಟ್ಪಾಡಿಯಲ್ಲಿ ರೈಲಿಗೆ ನಿಲುಗಡೆಗೆ ಅವಕಾಶ ನೀಡಲಾಗಿದೆ.

               ಇದಲ್ಲದೇ, ಕ್ರಿಸ್‍ಮಸ್ ರಜೆಯ ಸಂದರ್ಭದಲ್ಲಿ ಚೆನ್ನೈ-ಕೊಯಮತ್ತೂರು-ಚೆನ್ನೈ ಮಾರ್ಗದಲ್ಲಿ ವಂದೇಭಾರತ್ ವಿಶೇಷ ರೈಲು ಸಂಚಾರ ನಡೆಸಲಿದೆ. ಈ ಸೇವೆಯು ಮಂಗಳವಾರದಂದು ಜನವರಿ 30, 2024 ರವರೆಗೆ ಲಭ್ಯವಿರುತ್ತದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries