HEALTH TIPS

ಮುಜುಂಗಾವು ಶ್ರೀಪಾರ್ಥಸಾರಥಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭ

ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ಪ್ರಧಾನ ದೇವಾಲಯಗಳಲ್ಲಿ ಒಂದಾದ ಮುಜುಂಗಾವು ಪಾರ್ಥಸಾರಥಿ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಫೆ.12ರಂದು ಧ್ವಜಾರೋಹಣದೊಂದಿಗೆ ಆರಂಭಗೊಂಡಿದ್ದು, ಫೆ.18ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ. ಫೆ.13ರಂದು ಬೆಳಗ್ಗೆ ಗಣಪತಿ ಹವನ, ಶ್ರೀ ಬಲಿ, ಮಧ್ಯಾಹ್ನ 12ಕ್ಕೆ ಮಹಾಪೂಜೆ ನಡೆಯಲಿದ್ದು, ರಾತ್ರಿ ಅಂಕುರಾರೋಹಣ, ಭೂತಬಲಿ ನಡೆಯಲಿದೆ.ಫೆ.16ರಂದು ರಾತ್ರಿ ಅಂಕುರ ಪೂಜೆ, ಭೂತಬಲಿ, ಅರಮನೆ ಕಟ್ಟೆಯಲ್ಲಿ ಪೂಜೆ ಬಳಿಕ ಪೇಟೆ ಸವಾರಿ ನಡೆಯಲಿದೆ. ಫೆ.17ರಂದು ಬೆಳಗ್ಗೆ ಗಣಪತಿ ಹವನ, ಶ್ರೀ ಬಲಿ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ ಅಂಕುರಾರೋಹಣ, ಭೂತಬಲಿ ಬಳಿಕ ಬೆಡಿಕಟ್ಟೆಯಲ್ಲಿ ಪೂಜೆ, ಶಯನ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಫೆ.17ರಂದು ಬೆಳಗ್ಗೆ 10ರಿಂದ ವಿಶಾಲ ಯಕ್ಷಬಳಗ ನಂದಳಿಕೆ, ಕಾರ್ಕಳ ಇವರಿಂದ ತುಳು ಯಕ್ಷಗಾನ ತಾಳಮದ್ದಳೆ ಪಗರಿತ ಪರ್ಬ ನಡೆಯಲಿದೆ. ರಾತ್ರಿ 8ರಿಂದ ಸಾರಥಿ ಭಕ್ತವೃಂದ ಮುಜುಂಗಾವು ಇದರ ಪ್ರಾಯೋಜಕತ್ವದಲ್ಲಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಜರಗಲಿದೆ.


ಫೆ.18ರಂದು ಗಣಪತಿ ಹವನ, ಕವಾಟೋದ್ಘಾಟನೆ, ಪಂಚಾಮೃತ ಮತ್ತು ಸೀಯಾಳ ಅಭಿμÉೀಕ, ಜಲದ್ರೋಣಿ ಪೂಜೆ, ಯಾತ್ರಾ ಹೋಮ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ ಜರಗಲಿದೆ. ರಾತ್ರಿ ಅವಭೃತ, ರಾಜಾಂಗಣ ಪ್ರಸಾದ , ದ್ವಜಾವರೋಹಣ ಬಳಿಕ ಮಂತ್ರಾಕ್ಷತೆ ನಡೆಯಲಿದೆ. ವಾರ್ಷಿಕ ಜಾತ್ರಾ ಮಹೋತ್ಸವದಂಗವಾಗಿ ನಿತ್ಯವೂ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ ಹಾಗೂ ಎಲ್ಲಾ ದಿವಸ ಬೆಳಗ್ಗೆ ಮತ್ತು ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries