HEALTH TIPS

ಚುನಾವಣೆ ಲಾಭಕ್ಕಾಗಿ BJPಯಿಂದ 'ಆಪರೇಷನ್‌ ಸಿಂಧೂರ' ದುರ್ಬಳಕೆ ಸಾಧ್ಯತೆ: ಸಿಪಿಎಂ

ನವದೆಹಲಿ: 'ಚುನಾವಣೆ ಲಾಭಕ್ಕಾಗಿ 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆಯನ್ನು ಬಿಜೆಪಿಯು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಮುಂದೆ ಚುನಾವಣೆಗಳಿಗೆ ಜಾರಿಗೊಳಿಸುವ ಮಾದರಿ ನೀತಿ ಸಂಹಿತೆಯಲ್ಲಿ ಇದರ ವಿರುದ್ಧ ಎಚ್ಚರಿಕೆಯನ್ನು ಸೇರಿಸಬೇಕು' ಎಂದು ಸಿಪಿಎಂ ಪಕ್ಷ ಒತ್ತಾಯಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್, ವಿವೇಕ್‌ ಜೋಶಿ ಅವರನ್ನು ಭೇಟಿಯಾಗಿದ್ದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಮತ್ತು ಮುಖಂಡರಾದ ನಿಲೊಟ್‌ಪಲ್‌ ಬಸು ಮತ್ತು ಮುರಳೀಧರನ್ ಅವರು ಈ ಕುರಿತು ಗಮನಸೆಳೆದರು.

ಭೇಟಿ ಸಂದರ್ಭದಲ್ಲಿ ಸಿಪಿಎಂ ನಾಯಕರು ಆಯೋಗಕ್ಕೆ 11 ಪುಟಗಳ ಮನವಿಯನ್ನೂ ಸಲ್ಲಿಸಿದರು. ಚುನಾವಣಾ ಪ್ರಚಾರದ ಭಾಗಶಃ ವೆಚ್ಚವನ್ನು ಸರ್ಕಾರ ಭರಿಸಬೇಕು ಎಂಬುದೂ ಇದರಲ್ಲಿ ಸೇರಿದೆ. ಅಲ್ಲದೆ, ಚುನಾವಣೆ ಭರವಸೆಯಾಗಿ ಆರ್ಥಿಕ ಯೋಜನೆ ಪ್ರಕಟಿಸುವ ನಡೆಗೆ ವಿರೋಧ ವ್ಯಕ್ತಪಡಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries