HEALTH TIPS

ಕೇರಳ ಕರಾವಳಿಯಲ್ಲಿ ಇಂದು ರಾತ್ರಿ ಎತ್ತರದ ಹೆದ್ದೆರೆಗಳ ಸಾಧ್ಯತೆ: ಎಚ್ಚರಿಕೆ ನೀಡಿದ ರಾಷ್ಟ್ರೀಯ ಸಾಗರಶಾಸ್ತ್ರ ಸಂಶೋಧನಾ ಕೇಂದ್ರ

ತಿರುವನಂತಪುರಂ: ಕೇರಳ ಕರಾವಳಿಯಲ್ಲಿ ಇಂದು (ಮೇ.27) ರಾತ್ರಿ 8.30 ರವರೆಗೆ 3.4 ರಿಂದ 4.2 ಮೀಟರ್ ಎತ್ತರದ ಅಲೆಗಳು ಮತ್ತು ಸಮುದ್ರ ಕೊರೆತ ಸಂಭವಿಸುವ ಸಾಧ್ಯತೆ ಇದೆ ಎಂದು ರಾಷ್ಟ್ರೀಯ ಸಾಗರಶಾಸ್ತ್ರ ಸಂಶೋಧನಾ ಕೇಂದ್ರ (ಎನ್‍ಒಸಿ) ಪ್ರಕಟಿಸಿದೆ.


ಕಾಪ್ಪಿಲ್‍ನಿಂದ ತಿರುವನಂತಪುರಂನ ಪೊಜಿಯೂರ್‍ವರೆಗೆ, ಆಲಪ್ಪಾಡ್‍ನಿಂದ ಕೊಲ್ಲಂನ ಎಡವವರೆಗೆ, ಚೆಲ್ಲಾನಂನಿಂದ ಆಲಪ್ಪುಳದ ಅಝಿಕ್ಕಲ್ ಜೆಟ್ಟಿವರೆಗೆ, ಮುನಂಬಂನಿಂದ ಎರ್ನಾಕುಳಂನ ಮರುವಕ್ಕಾಡ್, ಅಟ್ಟುಪುರಂನಿಂದ ಕೊಡುಂಗಲ್ಲೂರು, ತ್ರಿಶೂರ್‍ನ ಅಟ್ಟುಪುರಂನಿಂದ ಕೊಡುಂಗಲ್ಲೂರು, ಕಡಲುಂಡಿ-ಕೋಝಿಕೋಡ್‍ನಿಂದ ರಾಮಪೇಟ್ಟಿವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ವಲಪಟ್ಟಣದಿಂದ ಕಣ್ಣೂರಿನ ನ್ಯೂ ಮಾಹಿವರೆಗೆ, ಕಾಸರಗೋಡು ಕುಂಜತ್ತೂರಿನಿಂದ ಕಾಸರಗೋಡಿನ ಕೊಟ್ಟಕುನ್ನುವರೆಗೆ ಮತ್ತು ಕನ್ಯಾಕುಮಾರಿ ಜಿಲ್ಲೆಯ ನೀರೋಡಿಯಿಂದ ಆರೋಕ್ಯಪುರಂವರೆಗೆ ರೆಡ್ ಅಲರ್ಟ್ ನೀಡಲಾಗಿದೆ. ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಅತ್ಯಂತ ಜಾಗರೂಕರಾಗಿರಬೇಕು. ರಾಷ್ಟ್ರೀಯ ಸಾಗರಶಾಸ್ತ್ರ ಸಂಶೋಧನಾ ಕೇಂದ್ರವು ಎಚ್ಚರಿಕೆಯನ್ನು ಹಿಂತೆಗೆಯುವವರೆಗೆ ಬೀಚ್ ಆಧಾರಿತ ಪ್ರವಾಸೋದ್ಯಮ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಹೇಳಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries