HEALTH TIPS

ಖ್ಯಾತ ವೈದ್ಯ, ಧಾರ್ಮಿಕ, ಸಾಮಾಜಿಕ ಮುಂದಾಳು ಡಾ.ಬಿ.ಎಸ್.ರಾವ್ ನಿಧನ

ಕಾಸರಗೋಡು : ಜಿಲ್ಲೆಯ ಹಿರಿಯ ತಲೆಮಾರಿನ  ಖ್ಯಾತ ವೈದ್ಯರೂ,ಧಾರ್ಮಿಕ,ಸಾಮಾಜಿಕ ಮುಂದಾಳುಗಳಾಗಿದ್ದ ಡಾ.ಬಿ.ಎಸ್.ರಾವ್ (ಬಾಯಾರು ಶಂಕರ ನಾರಾಯಣ ರಾವ್) (84) ನಿಧನರಾದರು.

ಅಲ್ಪ ಕಾಲದ ಅಸೌಖ್ಯದಿಂದಿದ್ದ ಇವರನ್ನು ನಿನ್ನೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆಸ್ಪತ್ರೆಯಲ್ಲಿ ನಿಧನರಾದರೆಂದು ಕುಟುಂಬ ಮೂಲಗಳು ತಿಳಿಸಿದೆ.

ಕಾಸರಗೋಡು ನರ್ಸಿಂಗ್ ಹೋಮಿನ ಸ್ಥಾಪಕರಲ್ಲಿ ಪ್ರಮುಖರಾದ ಇವರು
ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರೆ, ಬ್ರಹ್ಮಕಲಶೋತ್ಸವ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಎಡನೀರು ಮಠದ ಬ್ರಹ್ಮ್ಯೆಖ್ಯ ಶ್ರೀ ಕೇಶವಾನಂದ ಭಾರತೀಶ್ರೀಪಾದರ ನಿಕಟ ಶಿಷ್ಯ ವರ್ಗದವರಲ್ಲಿ ಪರಮಾಪ್ತರಾಗಿದ್ದ ಬಿ.ಎಸ್.ರಾವ್ ಮಠದ ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯರೂ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಕಾಸರಗೋಡು ನರ್ಸಿಂಗ್ ಹೋಂ ಹಾಸ್ಪಿಟಲನ್ನು ಸ್ಥಾಪಿಸಿ ಸ್ವತಃ ವೈದ್ಯರಾಗಿ ತರಬೇತಿಯನ್ನು ಕೂಡ ಆರಂಭಿಸಿ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲನ್ನಾಗಿಸಿದುದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಕಾಸರಗೋಡು ಮೆಡಿಕೇರ್ ಸೆಂಟರ್ ಪ್ರ. ಲಿ. ಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿದ್ದ ಅವರು ಮಧೂರು ಮೂಡಪ್ಪ ಸೇವಾ ಸಮಿತಿಯಲ್ಲೂ  ಸೇವಾ ನಿರತರಾಗಿದ್ದರು.. ಬಾಯಾರು ಪಂಚಲಿಂಗೇಶ್ವರ ದೇವಳದ ಆಡಳಿತ ಮೊಕೇಸರನಾಗಿದ್ದರು.
ಮೃತರು ಪತ್ನಿ ಪದ್ಮಾವತಿ ರಾವ್, ಪುತ್ರ ಡಾ.ಶಿವಪ್ರಸಾದ್ ರಾವ್, ಡಾ.ರೇಖಾ ಮಯ್ಯ, ರೂಪ ರಾವ್‌, ಹಾಗೂ ಅಪಾರ ಬಂಧು ಬಳಗವನ್ನಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries