HEALTH TIPS

ಸೇವಾ ಭಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಘಟನೆಯನ್ನು ಸಮರ್ಥಿಸಿದ ಉಪಕುಲಪತಿ ಡಾ. ಪಿ. ರವೀಂದ್ರನ್

ಕೋಝಿಕೋಡ್: ಕ್ಯಾಲಿಕಟ್ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ರವೀಂದ್ರನ್ ಸೇವಾ ಭಾರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಆ ಬಗ್ಗೆ ವಿವಾದಗಳ ನಂತರ ಘಟನೆಯನ್ನು ಸಮರ್ಥಿಸಿಕೊಂಡಿರುವರು. ಸೇವಾ ಭಾರತಿ ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಎಂದು ಪಿ. ರವೀಂದ್ರನ್ ಹೇಳಿದರು. ಅಲ್ಲದೆ, ಸೇವಾ ಭಾರತಿ ನಿಷೇಧಿತ ಸಂಘಟನೆಯಲ್ಲ. ಅದು ಹಲವು ಕೆಲಸಗಳನ್ನು ಮಾಡುತ್ತಿವೆ ಎಂದು ಅವರು ಹೇಳಿದರು.  

ತಾವು ಭಾಗವಹಿಸಬಾರದು ಎಂದು ಭಾವಿಸುವುದಿಲ್ಲ ಮತ್ತು ಬೆಂಬಲಿಸಬೇಕಾದವರು ಬಾಲಿಶ ವಿಷಯಗಳನ್ನು ತರುವ ಮೂಲಕ ವಿಶ್ವವಿದ್ಯಾಲಯದ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕುಲಪತಿ ಹೇಳಿದರು.

ಎಲ್ಲರನ್ನೂ ಒಳಗೊಳ್ಳುವ ಅಗತ್ಯವಿದೆ. ಅದಕ್ಕಾಗಿಯೇ ತಾನು ಅನೇಕ ಜನರು ಕರೆ ಮಾಡಿದಾಗಲೂ ಅವರೊಂದಿಗೆ ಮಾತನಾಡುವೆ  ಎಂದು ಡಾ. ಪಿ. ರವೀಂದ್ರನ್ ಹೇಳಿದರು.

ಜೂನ್ 26 ರಂದು ಸೇವಾ ಭಾರತಿಯ ಮಲಪ್ಪುರಂ ಜಿಲ್ಲಾ ಪ್ರತಿನಿಧಿ ಸಮ್ಮೇಳನದಲ್ಲಿ ಉಪಕುಲಪತಿ ಪಿ. ರವೀಂದ್ರನ್ ಭಾಗವಹಿಸಿದ್ದರು. ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪಿ. ರವೀಂದ್ರನ್, ಸೇವಾ ಭಾರತಿಯ ಚಟುವಟಿಕೆಗಳನ್ನು ಶ್ಲಾಘಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries