ತಿರುವನಂತಪುರಂ: ಅಡೂರ್ ಗೋಪಾಲಕೃಷ್ಣನ್ ಅವರ ನಿಂದನಾತ್ಮಕ ಭಾಷಣದ ಮೇಲೆ ಎಸ್ಸಿ/ಎಸ್ಟಿ ಆಯೋಗ ಕ್ರಮ ಕೈಗೊಂಡಿದೆ. ತಿರುವನಂತಪುರಂ ನಗರ ಪೋಲೀಸ್ ಆಯುಕ್ತರಿಂದ ವರದಿ ಕೋರಿದೆ. 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನು ವೇಲ್ ಸಲ್ಲಿಸಿದ ದೂರಿನ ಆಧಾರದ ಮೇಲೆ ಆಯೋಗದ ಮಧ್ಯಪ್ರವೇಶ. ಎಸ್ಸಿ/ಎಸ್ಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಕೋರಿ ದಿನು ವೇಲ್ ತಿರುವನಂತಪುರಂ ವಸ್ತು ಸಂಗ್ರಹಾಲಯ ಪೆÇಲೀಸರಿಗೆ ದೂರು ನೀಡಿದ್ದರು.
ಎಸ್ಸಿ/ಎಸ್ಟಿ ಸಮುದಾಯದ ಎಲ್ಲ ಸದಸ್ಯರನ್ನು ಅಪರಾಧಿಗಳು, ಕಳ್ಳರು ಅಥವಾ ಭ್ರಷ್ಟಾಚಾರ ಮಾಡುವ ಸಾಧ್ಯತೆ ಇರುವವರು ಎಂದು ಅಡೂರ್ ಚಿತ್ರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಡೂರ್ ಅವರ ಹೇಳಿಕೆಯು ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(1) ರ ಅಡಿಯಲ್ಲಿ ಬರುತ್ತದೆ ಮತ್ತು ಎಸ್ಸಿ/ಎಸ್ಟಿ ಸಮುದಾಯವನ್ನು ಭ್ರಷ್ಟಾಚಾರದೊಂದಿಗೆ ಜೋಡಿಸುತ್ತದೆ ಮತ್ತು ಅವಮಾನಕರವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಚಲನಚಿತ್ರ ನೀತಿ ನಿರೂಪಣೆಯ ಭಾಗವಾಗಿ ಸರ್ಕಾರ ಆಯೋಜಿಸಿದ್ದ ಚಲನಚಿತ್ರ ಸಮಾವೇಶದ ಸಮಾರೋಪದಲ್ಲಿ ಅಡೂರ್ ಗೋಪಾಲಕೃಷ್ಣನ್ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.

