HEALTH TIPS

ಎಡಿಎಂ ನವೀನ್ ಬಾಬು ಸಾವು ಪ್ರಕರಣ; ಮರು ತನಿಖೆಯನ್ನು ವಿರೋಧಿಸಿದ ಪಿ.ಪಿ.ದಿವ್ಯ-23 ರಂದು ಮತ್ತೆ ವಿಚಾರಣೆ

ಕಣ್ಣೂರು: ಎಡಿಎಂ ನವೀನ್ ಬಾಬು ಸಾವಿಗೆ ಸಂಬಂಧಿಸಿ ಮರು ತನಿಖೆಯನ್ನು ಪಿ.ಪಿ.ದಿವ್ಯ ವಿರೋಧಿಸಿದ್ದಾರೆ. ಮರು ತನಿಖೆಗಾಗಿ ಉದ್ದೇಶಿಸಿದ ವಿಷಯಗಳು ಸಾದುವಾದುದಲ್ಲ. ಎಲ್ಲಾ ಸಾಕ್ಷ್ಯಗಳನ್ನೂ ಈಗಾಗಲೇ ಪೋಲೀಸರು ಸಂಗ್ರಹಿಸಿರುವುದಾಗಿ ಪಿ.ಪಿ.ದಿವ್ಯ ಹೇಳಿದ್ದಾರೆ. ಈ ಬಗೆಗಿನ ಅರ್ಜಿಯನ್ನು ನ್ಯಾಯಾಲಯ ಇದೇ 23 ರಂದು ಪರಿಗಣಿಸಲಿದೆ. 

ಎಡಿಎಂ ನವೀನ್ ಬಾಬು ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಸಬೇಕೆಂದು ನವೀನ್ ಬಾಬು ಅವರ ಪತ್ನಿ ಮಂಜುಷಾ ಕಣ್ಣೂರು ಜ್ಯುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಯುತ್ತಿರುವಾಗ, ಹೆಚ್ಚಿನ ತನಿಖೆಗಾಗಿ ಪಿ.ಪಿ. ದಿವ್ಯಾ ವಾದವನ್ನು ವಿರೋಧಿಸಿದರು. ಪ್ರಕರಣವನ್ನು ಅನಿರ್ದಿಷ್ಟವಾಗಿ ಮುಂದೂಡಲು ಸಲ್ಲಿಸಲಾದ ಅರ್ಜಿ ಇದಾಗಿದೆ ಎಂದು ದಿವ್ಯಾ ಅವರ ವಕೀಲ ಅಡ್ವ. ವಿಶ್ವನ್ ಹೇಳಿದರು.

ನವೀನ್ ಬಾಬು ಅವರ ಪತ್ನಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತಿರಸ್ಕರಿಸಿದ ವಾದಗಳನ್ನು ಎತ್ತುತ್ತಿದ್ದಾರೆ ಎಂದು ವಿಶ್ವನ್ ಹೇಳಿದರು. ಆರೋಪಿ ಸಿಪಿಎಂ ಕಾರ್ಯಕರ್ತೆಯಾಗಿರುವುದರಿಂದ ಪೆÇಲೀಸರು ಸರಿಯಾದ ಸಾಕ್ಷ್ಯಗಳನ್ನು ಸಂಗ್ರಹಿಸಿಲ್ಲ ಮತ್ತು ಲಂಚ ಪಡೆದಿದ್ದಾರೆ ಎಂದು ನಕಲಿ ಪ್ರಕರಣವನ್ನು ಮಾಡಲು ಪ್ರಯತ್ನಿಸಿದ್ದಾರೆ ಎಂದು ನವೀನ್ ಬಾಬು ಅವರ ಪತ್ನಿ ತಮ್ಮ ಅರ್ಜಿಯಲ್ಲಿ ಹೇಳಿದ್ದರು. ಅನೇಕ ಎಲೆಕ್ಟ್ರಾನಿಕ್ ಸಾಕ್ಷ್ಯಗಳಲ್ಲಿನ ಅಕ್ರಮಗಳು ಸೇರಿದಂತೆ ಚಾರ್ಜ್‍ಶೀಟ್‍ನಲ್ಲಿ 13 ದೋಷಗಳನ್ನು ಅರ್ಜಿಯಲ್ಲಿ ತೋರಿಸಲಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries