HEALTH TIPS

ವಿಪತ್ತು ಪರಿಹಾರ ನಿಧಿ: ಪಿಣರಾಯಿ ವಿಜಯನ್ ಅವರನ್ನು ಸಾರ್ವಜನಿಕ ಚರ್ಚೆಗೆ ಬರುವಂತೆ ಸವಾಲೆಸೆದ ಅಮಿತ್ ಶಾ

ಕೊಚ್ಚಿ: ಕೇಂದ್ರ ಸರ್ಕಾರ ವಿಪತ್ತು ಪರಿಹಾರ ನಿಧಿಯನ್ನು ನೀಡುತ್ತಿಲ್ಲ ಎಂಬ ರಾಜ್ಯದ ನಿರಂತರ ವಾದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

ಮೋದಿ ಸರ್ಕಾರ ಯುಪಿಎ ಸರ್ಕಾರ ಹಂಚಿಕೆ ಮಾಡಿದ್ದಕ್ಕಿಂತ ಹಲವು ಪಟ್ಟು ಹೆಚ್ಚಿನ ಹಣವನ್ನು ಕೇರಳಕ್ಕೆ ನೀಡಿದೆ. ಈ ವಿಷಯದ ಕುರಿತು ಸಾರ್ವಜನಿಕ ಚರ್ಚೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಅವರು ಸವಾಲು ಹಾಕಿದ್ದಾರೆ. 


ಮತ ಬ್ಯಾಂಕ್ ಗಾಗಿ ಎಲ್‍ಡಿಪಿ ಮತ್ತು ಯುಡಿಎಫ್ ರಾಷ್ಟ್ರೀಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಅಮಿತ್ ಶಾ ಟೀಕಿಸಿದರು. ಎರಡೂ ರಂಗಗಳು ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಅನ್ನು ಪೆÇ್ರೀತ್ಸಾಹಿಸಿದವು. ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಕಾರಣ ಮಾತ್ರ ಪಿಎಫ್‍ಐ ನಿಷೇಧ ಸಾಧ್ಯವಾಯಿತು.

ಕೇರಳದಲ್ಲಿ ಬಿಜೆಪಿ ಬಲವಾದ ನೆಲೆಯನ್ನು ಹೊಂದಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಶೇಕಡಾ 25 ರಷ್ಟು ಮತಗಳನ್ನು ಪಡೆಯುತ್ತದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅದು ಗೆಲ್ಲುತ್ತದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು.

ಕೇರಳದ ಬೆಳವಣಿಗೆಯನ್ನು ಕಮ್ಯುನಿಸಂ ತಡೆಹಿಡಿಯುತ್ತಿದೆ. ಕೇರಳವು ಅರ್ಹವಾದ ಬೆಳವಣಿಗೆಯನ್ನು ಸಾಧಿಸಿಲ್ಲ. ಕೇರಳದ ಬಿಜೆಪಿ ಕಾರ್ಯಕರ್ತರು ಕಮ್ಯುನಿಸ್ಟ್ ದೌರ್ಜನ್ಯಗಳನ್ನು ಜಯಿಸುವ ಮೂಲಕ ಮುಂದುವರೆದಿದ್ದಾರೆ. ಸಿ. ಸದಾನಂದನ್ ಮಾಸ್ಟರ್ ಎಂ. ಪಿ ಅವರು ಕಮ್ಯುನಿಸ್ಟ್ ಕ್ರೌರ್ಯದ ಜೀವಂತ ಸಂಕೇತ ಎಂದು ಅಮಿತ್ ಶಾ ಹೇಳಿದರು. . ಕೊಚ್ಚಿಯಲ್ಲಿ ಖಾಸಗಿ ಮಾಧ್ಯಮವೊಂದು ನಿನ್ನೆ ಆಯೋಜಿಸಿದ್ದ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.  







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries