HEALTH TIPS

ಛತ್ತೀಸಗಢ: ಪೊಲೀಸರು, ಭದ್ರತಾ ಪಡೆಯ ಸಮ್ಮುಖದಲ್ಲಿ 210 ನಕ್ಸಲರು ಶರಣು

 ಜಗದಲ್‌ಪುರ: ಛತ್ತೀಸಗಢದ ಬಸ್ತಾರ್ ಜಿಲ್ಲೆಯ ಜಗದಲ್‌ಪುರದಲ್ಲಿ ಮಾವೋವಾದಿ ಸಂಘಟನೆಯ ಕೇಂದ್ರ ಸಮಿತಿ ಸದಸ್ಯ ಸೇರಿದಂತೆ 210 ನಕ್ಸಲರು ಪೊಲೀಸರು ಹಾಗೂ ಭದ್ರತಾ ಪಡೆಯ ಎದುರು ಶರಣಾಗಿದ್ದಾರೆ.

ಶರಣಾದವರಲ್ಲಿ ನಿಷೇಧಿತ ಸಂಘಟನೆಯ ಒಬ್ಬ ಕೇಂದ್ರ ಸಮಿತಿ ಸದಸ್ಯ, ದಂಡಕಾರಣ್ಯ ವಿಶೇಷ ವಲಯ ಸಮಿತಿಯ ನಾಲ್ವರು ನಕ್ಸಲರು, ವಿಭಾಗೀಯ ಸಮಿತಿಯ 21 ಸದಸ್ಯರು ಮತ್ತು 61 ಪ್ರದೇಶ ಸಮಿತಿ ಸದಸ್ಯರು ಸೇರಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.   


ಸಮಾಜದ ಮುಖ್ಯವಾಹಿನಿಗೆ ಬಂದ ಎಲ್ಲ ನಕ್ಸಲರನ್ನು ಬುಡಕಟ್ಟು ಸಮುದಾಯದ ಮುಖಂಡರು, ಪೊಲೀಸರು ಹಾಗೂ ಭದ್ರತಾ ಪಡೆ ಸ್ವಾಗತ ಕೋರಿದರು.

ಈ ವೇಳೆ ಂಏ-47 ರೈಫಲ್‌ಗಳು, ಸ್ವಯಂ ಲೋಡಿಂಗ್ ರೈಫಲ್‌ಗಳು, IಓSಂS ರೈಫಲ್‌ಗಳು,ಲೈಟ್ ಮೆಷಿನ್ ಗನ್ 303 ರೈಫಲ್‌ಗಳು, ಕಾರ್ಬೈನ್‌ಗಳು ಮತ್ತು 11 ಬ್ಯಾರೆಲ್ ಗ್ರೆನೇಡ್ ಲಾಂಚರ್‌ಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ನಕ್ಸಲರು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದರು.

ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಅವರು ನಕ್ಸಲರ ಶರಣಾಗತಿ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ದೇಶದಲ್ಲಿ ನಕ್ಸಲಿಸಂ ಅನ್ನು 2026ರ ಮಾರ್ಚ್‌ 31ರೊಳಗೆ ನಿರ್ಮೂಲನೆ ಮಾಡುವುದಾಗಿ ಕೇಂದ್ರ ಸರ್ಕಾರ ಪಣ ತೊಟ್ಟಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries