ಉಪ್ಪಳ: ಬಂದ್ಯೋಡು ಸಮೀಪದ ಹೇರೂರು ಬಜೆ ದೇಲಂತೊಟ್ಟು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಶೃದ್ಧಾಭಕ್ತಿಯಿಂದ ಮಂಗಳವಾರ ಚಾಲನೆ ನೀಡಲಾಗಿದೆ. ಅಕ್ಟೋಬರ್ 2ರಂದು ಆರಂಭಗೊಂಡು ನವೆಂಬರ್ 21ರ ತನಕ ನಡೆಯಲಿರುವ ವಿಶೇಷ ಕಾರ್ತಿಕ ದೀಪೆÇೀತ್ಸವದ ಅಂಗವಾಗಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ ಸಭೆ ಜರಗಿತು.
ಉಪ್ಪಳ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಮತ್ತು ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರರು ಆಶೀರ್ವಚನ ನೀಡಿದರು. ಕ್ಷೇತ್ರದ ಪುರೋಹಿತರಾದ ವೇದಮೂರ್ತಿ ಗಣೇಶ ನಾವಡರು ದಿವ್ಯ ಉಪಸ್ಥಿತಿದಲ್ಲಿದ್ದರು. ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ನಾರಾಯಣ ಹೆಗ್ಡೆ ಕೋಡಿಬೈಲ್, ಸಿ.ಎಸ್ ಕೃಷ್ಣಪ್ಪ ಐಲ, ಈಶ್ವರ ಐಲ, ದಾಮೋದರ ಮಯ್ಯ, ಚಿದಾನಂದ ಮಯ್ಯ, ಶಾಲಿನಿ ಉದಯ್ ಕುಮಾರ್, ಲಲಿತ ಜಗನ್ನಾಥ ಶೆಟ್ಟಿ ಅತಿಥಿಗಳಾಗಿ ಉಪಸ್ಥಿತಿಯಲ್ಲಿದ್ದರು. ವೇದಮೂರ್ತಿ ಹರಿನಾರಾಯಣ ಮಯ್ಯ ಸ್ವಾಗತಿಸಿ, ರುಚಿತ್ ಪೂಜಾರಿ ಕಂಗ್ವೆ ವಂದಿಸಿದರು. ಬಬಿತಾ ಕೃಷ್ಣ ಮಯ್ಯ ಪ್ರಾರ್ಥಿಸಿ ನಿರೂಪಿಸಿದರು. ಸಂಜೆ ತಾಡ ಶ್ರೀ ಮಹಾವಿಷ್ಣು ಮೂರ್ತಿ ಭಜನಾ ಸಂಘ ಇವರಿಂದ ಭಜನಾ ಸಂಕೀರ್ತನೆ, ವಿಷ್ಣು ಸಹಸ್ರನಾಮ ಸ್ತೋತ್ರಪಠನ, ಶ್ರೀ ದೇವರಿಗೆ ದೀಪೆÇೀತ್ಸವ ಹಾಗೂ ಅನ್ನಸಂತರ್ಪಣೆ ನೆರವೇರಿತು.

.jpg)
