HEALTH TIPS

ಆಕ್ಷೇಪಣೆಗಳೆಲ್ಲ ತಿರಸ್ಕøತ: ಪಿಎಂ ಶ್ರೀ ಯೋಜನೆಗೆ ಸಹಿ ಹಾಕಿದ ಕೇರಳ

ತಿರುವನಂತಪುರಂ: ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಪಿಎಂ ಶ್ರೀ ಯೋಜನೆಗೆ ಕೇರಳ ಸಹಿ ಹಾಕಿದೆ.

ರಾಜ್ಯದ ಪರವಾಗಿ ಶಿಕ್ಷಣ ಕಾರ್ಯದರ್ಶಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕೇರಳ ಮೂರು ವರ್ಷಗಳಿಂದ ವಿರೋಧಿಸುತ್ತಿದ್ದ ಯೋಜನೆಗೆ ಸಹಕರಿಸಿರುವುದು ಅತಿ ವಿಶೇಷವಾಗಿದ್ದು,  ತಡೆಹಿಡಿಯಲಾಗಿದ್ದ ಹಣವನ್ನು ಕೇರಳ ಪಡೆಯಲಿದೆ. ಕೇರಳಕ್ಕೆ 1,500 ಕೋಟಿ ರೂ. ಮೌಲ್ಯದ ಎಸ್‍ಎಸ್‍ಎ ನಿಧಿಗಳು ಶೀಘ್ರ ಲಭಿಸಲಿದೆ.  


ರಾಜ್ಯ ಸರ್ಕಾರದ ಈ ಕ್ರಮವು ಕ್ಯಾಬಿನೆಟ್ ಸಭೆಯಲ್ಲಿ ಸಿಪಿಐ ಎತ್ತಿದ ಆಕ್ಷೇಪಣೆಗಳನ್ನು ಮೀರಿ ನಡೆಸಿದ ವಿಚಿತ್ರ ಉಪಕ್ರಮವಾಗಿ ದಾಖಲಾಗಲಿದೆ. ಕೇರಳವು ರಾಷ್ಟ್ರೀಯ ಶಿಕ್ಷಣ ಚೌಕಟ್ಟನ್ನು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸಿಪಿಐ ಮುಖ್ಯವಾಗಿ ಸೂಚಿಸಿದೆ.

ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೋಯ್ ವಿಶ್ವಂ ಆಕ್ಷೇಪಣೆಯನ್ನು ಸ್ಪಷ್ಟಪಡಿಸಲು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರನ್ನು ಭೇಟಿ ಮಾಡಿದ್ದರು.

ಕೇರಳ ಸಹಿ ಮಾಡಿದ ಒಪ್ಪಂದದ ಪ್ರಕಾರ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) 2020 ಅನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಜಾರಿಗೆ ತರಬೇಕಾಗುತ್ತದೆ.

ಪ್ರಧಾನ ಮಂತ್ರಿಗಳ ಉದಯ ಭಾರತ ಶಾಲೆ ಯೋಜನೆಯನ್ನು ಕೇಂದ್ರ ಸರ್ಕಾರವು 2020 ರಲ್ಲಿ ಘೋಷಿಸಿತು. ಪ್ರಧಾನ ಮಂತ್ರಿ ಶ್ರೀ ಯೋಜನೆಯಡಿಯಲ್ಲಿ, 14,500 ಸರ್ಕಾರಿ ಶಾಲೆಗಳನ್ನು ಮಾದರಿ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಇದಕ್ಕಾಗಿ 27,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಭಾರತದಾದ್ಯಂತ ಕೇಂದ್ರ, ರಾಜ್ಯ ಮತ್ತು ಸ್ಥಳೀಯಾಡಳಿತ ಸರ್ಕಾರಗಳು ನಡೆಸುವ ಹಿರಿಯ ಮಾಧ್ಯಮಿಕ ಶಾಲೆಗಳನ್ನು ಸಹ ಈ ಯೋಜನೆಯಲ್ಲಿ ಸೇರಿಸಲಾಗುವುದು. ಕೇರಳದ ಒಂದು ಬ್ಲಾಕ್‍ನಲ್ಲಿರುವ ಎರಡು ಶಾಲೆಗಳು ಈ ಯೋಜನೆಯ ಭಾಗವಾಗಿರುತ್ತವೆ.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries