HEALTH TIPS

ರಾಮ ಮಂದಿರ ಧ್ವಜಾರೋಹಣ ತಾಲೀಮಿಗೆ ಸೇನಾ ಅಧಿಕಾರಿಗಳು ಸಾಥ್

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ಶಿಖರದ ಮೇಲೆ ಧ್ವಜಾರೋಹಣ ತಾಲೀಮಿಗೆ ಮಂಗಳವಾರ ಹಿರಿಯ ಸೇನಾ ಅಧಿಕಾರಿಗಳು ರಾಮ ಮಂದಿರ ಟ್ರಸ್ಟ್ ಜೊತೆ ಸೇರಿಕೊಂಡ ಸಹಾಯ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವೆಂಬರ್ 25 ರಂದು ನಿಗದಿಯಾಗಿರುವ ಧ್ವಜಾರೋಹಣ ಸಮಾರಂಭಕ್ಕೆ ಸರಿಯಾದ ತರಬೇತಿ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ದೇವಾಲಯ ಟ್ರಸ್ಟ್ ಸೇನೆಯಿಂದ ಸಹಾಯ ಕೋರಿದೆ ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದ್ದಾರೆ.

"ದೇವಾಲಯ ಟ್ರಸ್ಟ್‌ನ ಸಭೆ ನಡೆಸಲಾಯಿತು. ಸಭೆಯಲ್ಲಿ ಧ್ವಜಾರೋಹಣಕ್ಕೆ ಸಂಬಂಧಿಸಿದ ತಾಂತ್ರಿಕ ಸವಾಲುಗಳನ್ನು ಚರ್ಚಿಸಲಾಯಿತು" ಎಂದು ಅವರು ಹೇಳಿದರು.

ದೇವಾಲಯದ ಧ್ವಜವು 11 ಕಿಲೋಗ್ರಾಂಗಳಷ್ಟು ತೂಗುತ್ತದೆ, ಧ್ವಜಸ್ತಂಭವು 11 ಅಡಿ ಎತ್ತರವಿರುತ್ತದೆ ಮತ್ತು ಧ್ವಜವು 22 ಅಡಿ ಅಗಲ ಇದೆ ಎಂದು ಮಿಶ್ರಾ ತಿಳಿಸಿದರು.

ಸಮಾರಂಭವು ದೋಷರಹಿತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ನಿರಂತರ ತಾಲೀಮು ನಡೆಸಲಾಗುವುದು ಎಂದು ಅವರು ಹೇಳಿದರು.

"ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸೇನಾ ಅಧಿಕಾರಿಗಳು ವಿವರವಾದ ಸಲಹೆಯನ್ನು ನೀಡಿದ್ದಾರೆ ಮತ್ತು ರಾಮ ಮಂದಿರ ದೇವಾಲಯ ಟ್ರಸ್ಟ್ ಅವರ ಶಿಫಾರಸುಗಳನ್ನು ಕಾರ್ಯಗತಗೊಳಿಸುತ್ತದೆ. ರಾಮ ಮಂದಿರದ ಧ್ವಜವನ್ನು ಇಡೀ ಪ್ರಪಂಚ ಗಮನಿಸುತ್ತಿರುವುದರಿಂದ ನಾವು ಮಧ್ಯಪ್ರವೇಶಿಸುವುದಿಲ್ಲ" ಎಂದು ಮಿಶ್ರಾ ಹೇಳಿದರು.

ದೇವಾಲಯ ಸಂಕೀರ್ಣದಲ್ಲಿ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಲು ಸುಮಾರು 8,000 ಅತಿಥಿಗಳಿಗೆ ಆಹ್ವಾನಿಸಲಾಗಿದೆ ಎಂದು ಅವರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries