HEALTH TIPS

ಶಬರಿಮಲೆಯಲ್ಲಿ ಚಿನ್ನ ಕಳವು: ಜಾಗರೂಕನಾಗಿರುತ್ತೇನೆ; ನೂತನ ಅರ್ಚಕ

 ಪತ್ತನಂತಿಟ್ಟ: 'ಶಬರಿಮಲೆ ದೇವಸ್ಥಾನದ ಚಿನ್ನ ಲೇಪಿತ ತಾಮ್ರದ ದ್ವಾರಪಾಲಕರ ಮೂರ್ತಿಗಳಲ್ಲಿನ ಚಿನ್ನದ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಮತ್ತು ಗರ್ಭಗುಡಿಯ ದ್ವಾರದಲ್ಲಿನ ಚಿನ್ನ ಕಳವಿನ ಪ್ರಕರಣದ ಕುರಿತು ಜಾಗರೂಕನಾಗಿರುತ್ತೇನೆ' ಎಂದು ದೇವಸ್ಥಾನಕ್ಕೆ ಆಯ್ಕೆಯಾಗಿರುವ ನೂತನ ಅರ್ಚಕ ಪ್ರಸಾದ್‌ ಇ.ಡಿ. ಶನಿವಾರ ಹೇಳಿದರು.

ತ್ರಿಶ್ಶೂರಿನ ಪ್ರಸಾದ್‌ ಅವರನ್ನು ಶಬರಿಮಲೆ ದೇವಸ್ಥಾನಕ್ಕೆ ಮತ್ತು ಕೊಲ್ಲಂನ ಮನು ನಂಬೂದರಿ ಎಂ.ಜಿ ಅವರನ್ನು ಮಲ್ಲಿಕಾಪುರ ದೇವಸ್ಥಾನಕ್ಕೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಅರ್ಚಕರನ್ನಾಗಿ ಆಯ್ಕೆ ಮಾಡಲಾಯಿತು. ಈ ಬಳಿಕ ಮಾತನಾಡಿದ ಪ್ರಸಾದ್‌, 'ಅಯ್ಯಪ್ಪನಿಗೆ ಎಲ್ಲವೂ ತಿಳಿದಿದೆ. ಅವನೇ ಈ ಸಮಸ್ಯೆಗೆ ಪರಿಹಾರವನ್ನೂ ನೀಡುತ್ತಾನೆ. ಈ ಪ್ರಕರಣದಿಂದ ಶಬರಿಮಲೆಗೆ ಬರುವ ಭಕ್ತರ ಸಂಖ್ಯೆಯಲ್ಲೇನೂ ಕಡಿಮೆಯಾಗಿಲ್ಲ' ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries