HEALTH TIPS

ದೋಷಮುಕ್ತಿಯ 18 ವರ್ಷ ಬಳಿಕ ಪ್ರಕರಣಕ್ಕೆ ಮರುಜೀವ; ಛತ್ತೀಸ್‌ಗಢ ಮಾಜಿ ಸಿಎಂ ಪುತ್ರನಿಗೆ ಕಂಟಕ

ನವದೆಹಲಿ: ಹತ್ಯೆ ಪ್ರಕರಣವೊಂದರಲ್ಲಿ ಖುಲಾಸೆಯಾಗಿ 18 ವರ್ಷಗಳ ಬಳಿಕ ಸುಪ್ರೀಂಕೋರ್ಟ್ ಮತ್ತೆ ಆ ಪ್ರಕರಣಕ್ಕೆ ಮರುಜೀವ ನೀಡಿದೆ. ಇದರೊಂದಿಗೆ ಛತ್ತೀಸ್ಗಢದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿಯೊಬ್ಬರ ಹತ್ಯೆ ಪ್ರಕರಣ, ರಾಜ್ಯದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಪುತ್ರ ಅಮಿತ್ ಜೋಗಿಗೆ ಮತ್ತೆ ಕಂಟಕವಾಗಿ ಪರಿಗಣಿಸಿದೆ.

ಎನ್‌ಸಿಪಿ ಮುಖಂಡ ರಾಮಾವತಾರ ಜಗ್ಗಿ ಅವರ ಹತ್ಯೆ ಹತ್ಯೆ 2003ರಲ್ಲಿ ನಡೆದಿತ್ತು. ಅಜಿತ್ ಜೋಗಿ ಛತ್ತಿಸ್ಗಢ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ನಿವಾಸದಲ್ಲಿ ಈ ಹತ್ಯೆಯ ಪಿತೂರಿ ನಡೆದಿತ್ತು ಎನ್ನಲಾಗಿದೆ. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು ಹಾಗೂ ವಿಚಾರಣಾ ನ್ಯಾಯಾಲಯ 2007ರಲ್ಲಿ ಇತರ ಇಪ್ಪತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಅಮಿತ್ ಜೋಗಿಯನ್ನು ದೋಷಮುಕ್ತಗೊಳಿಸಿತ್ತು. ಆ ಬಳಿಕ ಸರ್ಕಾರ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸಿಬಿಐ ಕೂಡಾ ಖುಲಾಸೆಯನ್ನು ಪ್ರಶ್ನಿಸಿ 1400 ದಿನಗಳ ಬಳಿಕ ಹೈಕೋರ್ಟ್ ಮೆಟ್ಟಲೇರಿತ್ತು.

ಆದರೆ ಭಿನ್ನ ಕಾರಣಗಳಿಂದ ಈ ಎರಡೂ ಮೇಲ್ಮನವಿಗಳನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಈ ಮೂಲಕ ಜೋಗಿ ವಿರುದ್ಧದ ಪ್ರಕರಣ ಅಂತ್ಯ ಕಂಡಿತ್ತು. ಪ್ರಕರಣವನ್ನು ಸಿಬಿಐ ವಿಚಾರಣೆ ನಡೆಸಿರುವುದರಿಂದ ಮೇಲ್ಮನವಿ ಸಲ್ಲಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ರಾಜ್ಯದ ಮನವಿಯನ್ನು ತಿರಸ್ಕರಿಸಿದರೆ, 1373 ದಿನ ವಿಳಂಬವಾಗಿ ಅರ್ಜಿ ಸಲ್ಲಿಸಿದ್ದಕ್ಕೆ ಸಿಬಿಐ ಅರ್ಜಿಯನ್ನೂ ವಜಾಗೊಳಿಸಿತ್ತು. ಆ ಬಳಿಕ ರಾಜ್ಯ ಸರ್ಕಾರ ಮತ್ತು ಸಿಬಿಐ ಸುಪ್ರೀಂ ಮೆಟ್ಟಲೇರಿದ್ದವು.

ಸಿಬಿಐ ಮೇಲ್ಮನವಿಯನ್ನು ಸ್ವೀಕರಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ, ಈ ಪ್ರಕರಣ ಸೂಕ್ಷ್ಮ ಸ್ವರೂಪದ್ದಾಗಿದ್ದು, ಸಿಬಿಐ ಮೇಲ್ಮನವಿಯನ್ನು ಪರಿಗಣಿಸುವ ವೇಳೆ ಹೈಕೋರ್ಟ್ ಉದಾರ ಹಾಗೂ ಪ್ರಾಯೋಗಿಕ ದೃಷ್ಟಿಕೋನ ಪ್ರದರ್ಶಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries