HEALTH TIPS

11 ನಕ್ಸಲರು ಶರಣಾಗತಿ, 2026ರ ಮಾರ್ಚ್‌ಗೆ ಮಹಾರಾಷ್ಟ್ರ ನಕ್ಸಲ್ ಮುಕ್ತ: ಡಿಜಿಪಿ

ಗಡಿಚಿರೋಲಿ: ಮಹಾರಾಷ್ಟ್ರದ ಗಡಿಚಿರೋಲಿಯಲ್ಲಿ 11 ಹಿರಿಯ ನಕ್ಸಲರು ಪೊಲೀಸರಿಗೆ ಬುಧವಾರ ಶರಣಾಗಿದ್ದಾರೆ.

ಇವರನ್ನು ಹುಡುಕಿಕೊಟ್ಟವರಿಗೆ ಒಟ್ಟು ₹82 ಲಕ್ಷ ಬಹುಮಾನ ಈ ಹಿಂದೆ ಘೋಷಣೆಯಾಗಿತ್ತು.

'ನಕ್ಸಲ್ ಚಟುವಟಿಕೆ ಅವನತಿಯ ಹಂತಕ್ಕೆ ತಲುಪಿದೆ. ಗಡಿಚಿರೋಲಿಯಲ್ಲಿ 10ರಿಂದ 11 ನಕ್ಸಲರಷ್ಟೆ ಸಕ್ರಿಯರಾಗಿರಬಹುದು.

2026ರ ಮಾರ್ಚ್‌ 31ರೊಳಗೆ ಮಹಾರಾಷ್ಟ್ರವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ತಲುಪಲಿದ್ದೇವೆ' ಎಂದು ಡಿಜಿಪಿ ರಶ್ಮಿ ಶುಕ್ಲಾ ತಿಳಿಸಿದರು.

'ಗಡಿಚಿರೋಲಿಯಲ್ಲಿ ಈ ವರ್ಷ 100ಕ್ಕೂ ಅಧಿಕ ನಕ್ಸಲರು ಶರಣಾಗಿದ್ದಾರೆ' ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries