HEALTH TIPS

26 ರಿಂದ ಬಾಳೆಮೂಲೆ ಶಾಲೆಯಲ್ಲಿ ಕಾಟುಕುಕ್ಕೆ ಶಾಲಾ ಎನ್ನೆಸ್ಸೆಸ್ ಶಿಬಿರ

ಪೆರ್ಲ: ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಶಾಲಾ ಎನ್ನೆಸ್ಸೆಸ್ ಘಟಕದ ವಾರ್ಷಿಕ ಶಿಬಿರ ಡಿ.26 ರಿಂದ ಜ.1ರ ವರೆಗೆ ಬಾಳೆಮೂಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದೆ.

ಡಿ.26 ರಂದು ಬೆಳಿಗ್ಗೆ 9.30ಕ್ಕೆ ಬಾಳೆಮೂಲೆ ಶಾಲಾ ಮುಖ್ಯೋಪಾಧ್ಯಾಯ ರಾಜೇಶ ಬಿ.ಧ್ವಜಾರೋಹಣಗೈಯ್ದು ಚಾಲನೆ ನೀಡುವರು. 10.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲಾ ಪ್ರಬಂಧಕ ಮಿತ್ತೂರು ಪುರುಷೋತ್ತಮ ಭಟ್ ಅಧ್ಯಕ್ಷತೆ ವಹಿಸಲಿದ್ದು, ಗ್ರಾ.ಪಂ. ಅಧ್ಯಕ್ಷರು ಉದ್ಘಾಟಿಸುವರು. ಜಿ.ಪಂ.ಸದಸ್ಯ ಸೋಮಶೇಖರ ಜೆ.ಎಸ್., ಗ್ರಾ.ಪಂ.ಸದಸ್ಯ ಸುಧಾಕರ ಮಾಸ್ತರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿವಿಧ ಪಕ್ಷಗಳ ಜನಪ್ರತಿನಿಧಿಗಳು, ಗ್ರಾಮ, ಬ್ಲಾಕ್, ಜಿಲ್ಲಾ ಪಂಚಾಯತಿಗಳ ಸದಸ್ಯರು ವಿವಿಧ ವಲಯದ ಪ್ರಮುಖರು ಉಪಸ್ಥಿತರಿರುವರು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಕೆ., ಯೋಜನಾಧಿಕಾರಿ ವಾಣಿ ಕೆ. ಮೊದಲಾದವರು ನೇತೃತ್ವ ವಹಿಸುವರು. ಬಳಿಕ ವಿವಿಧ ದಿನಗಳಲ್ಲಿ ಶಿಬಿರಾರ್ಥಿಗಳಿಗೆ ತರಬೇತಿ, ಸಮಾಜ ಕಾರ್ಯಕ್ರಮ, ಸಾಂಸ್ಕøತಿಕ-ಕ್ರೀಡಾ ಚಟುವಟಿಕೆಗಳು ನಡೆದು ಜ.1 ರಂದು ಅಪರಾಹ್ನ ಸಮಾರೋಪಗೊಳ್ಳಲಿದೆ.

ಶಿಬಿರದಲ್ಲಿ ಪ್ರಮುಖವಾಗಿ ಅಮಲು ಪದಾರ್ಥ ವಿರೋಧಿ ಜನಜಾಗೃತಿ, ಬೀಜಕ್ಕೆ ಕೈಜೋಡಿಸೋಣ-ಮಣ್ಣು ಹಾಗೂ ಮನುಷ್ಯರು, ಗ್ರಾಮಪಥ, ಜಾಗೃತಿ ಕವಚ, ಸ್ನೇಹಗಾನ ಮೊದಲಾದ ಗಮನಾರ್ಹ ಕಾರ್ಯಕ್ರಮಗಳು ನಡೆಯಲಿವೆ.  

National Service Scheme(NSS)-NSS Portal & How To Join

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries