HEALTH TIPS

ಆನೆಗಳು ಇಳಿಯುವ ಸಾಧ್ಯತೆ: ಉರಕ್ಕುಳಿ ಜಲಪಾತದಲ್ಲಿ ಸ್ನಾನ ಮಾಡದಂತೆ ಅರಣ್ಯ ಇಲಾಖೆ ಮನವಿ

ಶಬರಿಮಲೆ: ಶಬರಿಮಲೆ ಪಥದಲ್ಲಿ ಹೆಚ್ಚುತ್ತಿರುವ ವನ್ಯಜೀವಿಗಳ ದಾಳಿಯ ಹಿನ್ನೆಲೆಯಲ್ಲಿ, ಶಬರಿಮಲೆಯ ಉರಕ್ಕುಳಿ ಜಲಪಾತದಲ್ಲಿ ಸ್ನಾನ ಮಾಡದಂತೆ ಅರಣ್ಯ ಇಲಾಖೆ ಅಯ್ಯಪ್ಪ ಭಕ್ತರಿಗೆ ನಿರ್ದೇಶಿಸಿದೆ. 

ಸನ್ನಿಧಾನಂ ವಿಶೇಷ ಕರ್ತವ್ಯ ಶ್ರೇಣಿ ಕಚೇರಿಯಿಂದ ಎಚ್ಚರಿಕೆ ನೀಡಲಾಗಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಪ್ರವೇಶವನ್ನು ನಿರ್ಬಂಧಿಸಲಾದ ಪ್ರದೇಶವಾಗಿದೆ ಎಂದು ಅವರು ಹೇಳಿದರು. ಮರಿಗಳ ಸಹಿತ ಆನೆಗಳು ಹೆಚ್ಚಾಗಿ ಮುಸ್ಸಂಜೆಯಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಳಿಯುತ್ತವೆ. ಅಲ್ಲಿಗೆ ಹೋಗುವ ಮಾರ್ಗವು ಕಡಿದಾದ ಮತ್ತು ಜಾರುವಂತಿರುತ್ತದೆ. ಕೆಳ ಬಿದ್ದರೆ, ಗಂಭೀರವಾಗಿ ಗಾಯಗೊಳ್ಳಬಹುದು. ಯಾತ್ರಿಕರ ಸುರಕ್ಷತೆಯೇ ಮುಖ್ಯ ಎಂದು ಕರ್ತವ್ಯ ಶ್ರೇಣಿ ಅಧಿಕಾರಿ ಅರವಿಂದ್ ಬಾಲಕೃಷ್ಣನ್ ಹೇಳಿರುವರು ಮತ್ತು ಎಲ್ಲರೂ ಸಹಕರಿಸುವಂತೆ ವಿನಂತಿಸಿದರು.

ಅಯ್ಯಪ್ಪ ಭಕ್ತರು ಸಾಮಾನ್ಯವಾಗಿ ಪಂಡಿತಾವಲಂ ಹತ್ತಿರದ ಉರಕ್ಕುಳಿ ದೇವಸ್ಥಾನದಲ್ಲಿ ಸ್ನಾನ ಮಾಡಿ ಸನ್ನಿಧಾನಂ ತಲುಪುತ್ತಾರೆ. ಉರಕ್ಕುಳಿ ಪ್ರದೇಶದಲ್ಲಿ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries