HEALTH TIPS

ಬಿಜೆಪಿ ಬಂಡುಕೋರನ ಬೆಂಬದಿಂದ ಅತಂತ್ರ ಪುತ್ತಿಗೆಯಲ್ಲಿ ಯುಡಿಎಫ್ ಆಡಳಿತಕ್ಕೆ

ಕುಂಬಳೆ: ಯಾರಿಗೂ ಬಹುಮತವಿಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದ ಪುತ್ತಿಗೆ ಗ್ರಾ. ಪಂ. ನಲ್ಲಿ ಬಿಜೆಪಿ ಬಂಡುಕೋರ ಸದಸ್ಯ ನೀಡಿದ ಬೆಂಬಲದ ಪರಿಣಾಮ ಯುಡಿಎಫ್ ಪಂಚಾಯತ್ ಆಡಳಿತಕ್ಕೇರಿದೆ. ಯುಡಿಎಫ್ ನ ಯುವ ನಾಯಕಿ, 23ರ ಹರೆಯದ ಫಿದಾ ಊಜಂಪದವು ಎಂಟು ಸದಸ್ಯ ಬಲದ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.

ಅನಂತಪುರ ವಾರ್ಡಿನಿಂದ ಬಿಜೆಪಿ ಬಂಡುಕೋರ, ಪಕ್ಷೇತರನಾಗಿ ಸ್ಪರ್ಧಿಸಿ ಚುನಾಯಿತರಾದ ಸತೀಶ ಅವರು ಯುಡಿಎಫ್ ಬೆಂಬಲಿಸಿದ ಕಾರಣ ಪಂ. ಆಡಳಿತ ಯುಡಿಎಫ್ ಗೆ ಒಲಿದೆ. ಎಡರಂಗಕ್ಕೆ ಏಳು ಸದಸ್ಯ ಬಲವಿದೆ. ‌ಜೊತೆಗೆ ಬಿಜೆಪಿಯ ಎರಡು ಮತ್ತು ಯುಡಿಎಫ್ ನ ಒಂದು ಮತ ನೋಟಕ್ಕೆ ಬಿದ್ದಿದೆ. ಈ ಮೂಲಕ ಪುತ್ತಿಗೆಯಲ್ಲಿ ಮತ್ತೊಮ್ಮೆ ಕೋ-ಲೀ-ಬಿ. ಮ್ಯೆತ್ರಿ ಅನಾವರಣಗೊಂಡಿದೆ ಎಂದು ಸಿಪಿಎಂ ಆರೋಪಿಸಿದೆ.
ಎರಡೂವರೆ ದಶಕದ ಹಿಂದೊಮ್ಮೆ ಪುತ್ತಿಗೆಯಲ್ಲಿ ಬಿಜೆಪಿ-ಯುಡಿಎಫ್ ಮೖತ್ರಿಕೂಟದ ಆಡಳಿತ ನಡೆದಿತ್ತು. ಅಂದು ಕಾಂಗೖ, ಲೀಗ್, ಬಿಜೆಪಿ ಮೖತ್ರಿ ಕೇರಳ ರಾಜಕೀಯದಲ್ಲೇ ವ್ಯಾಪಕ ಚರ್ಚೆಯಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries