HEALTH TIPS

ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಕಿರುಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ ಮುಕ್ತಾಯ

ಬದಿಯಡ್ಕ: ಕುಕ್ಕಂಗೋಡ್ಲು ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಕಿರುಷಷ್ಠಿ  ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಡಿ.25 ಕ್ಕೆ ರಂಗಪೂಜೆ ಅತ್ತಾಳ ಪೂಜೆ ಪ್ರಸಾದ ಭೋಜನ ನಡೆಯಿತು. ಊರ ಬಾಲ ಕಲಾವಿದರಿಂದ ನೃತ್ಯ ವೈವಿಧ್ಯ, ಶ್ರೀ ವಿಷ್ಣುಮೂರ್ತಿ ಕುಣಿತ ಭಜನಾ ಸಂಘ ಕಲ್ಲಕಟ್ಟ ಇವರ ತಂಡದಿಂದ ಕುಣಿತ ಭಜನೆ ನಡೆಯಿತು. ಡಿ 26 ರಂದು ಗಣಪತಿ ಹವನ, ನವಕ ಅಭಿಷೇಕ,  ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಿತು. 


ಬಳಿಕ ಡಾ.ವಾಣಿಶ್ರೀ ಕಾಸರಗೋಡು ಇವರ ನೇತೃತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾ0ಸ್ಕøತಿಕ  ವೇದಿಕೆ ಕಾಸರಗೋಡು  ಇವರಿಂದ ಸಾಹಿತ್ಯ ಗಾನ ವೈಭವ ಮತ್ತು  ಸ್ಕಂದ ಯಕ್ಷ ಕಲಾ ಸಂಘ ಕಾರಡ್ಕ ಇವರಿಂದ ಯಕ್ಷಗಾನ ತಾಳ ಮದ್ದಳೆ ನಡೆಯಿತು. ಬಳಿಕ ರಕ್ತೇಶ್ವರಿ ತಂಬಿಲ, ತಾಯಂಬಕ, ಸುಬ್ರಮಣ್ಯ ಸ್ವಾಮಿಯ ಮಹಾಪೂಜೆ, ಶ್ರೀ ಭೂತಬಲಿ ಉತ್ಸವ, ಬೆಡಿಸೇವೆ, ಬಟ್ಟಲು ಕಾಣಿಕೆ, ರಾಜಾಂಗಂಣ ಪ್ರಸಾದ, ಮಂತಾಕ್ಷತೆ. ನಡೆಯಿತು. ಏಣಿಯರ್ಪು ಕೋದಂಬರತ್ ತರವಾಡಿನಿಂದ ಭಂಡಾರ ಬಂದು ತೊಡ0ಙಲ್ ನಡೆದು, ಡಿ.27 ರಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ  ಕೋಲ ಮತ್ತು ಪ್ರಸಾದ ವಿತರಣೆ, ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ,ಭಂಡಾರ  ತರವಾಡಿಗೆ ನಿರ್ಗಮಿಸುವುದರೊ0ದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries