ನವದೆಹಲಿ: ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟದ ಆರೋಪಿಗಳಲ್ಲಿ ಒಬ್ಬನಾದ ರಷೀದ್ ಅಲಿಯನ್ನು ದೆಹಲಿಯ ಪಟಿಯಾಲ ನ್ಯಾಯಾಲಯದ ಮುಂದೆ ಮಂಗಳವಾರ ಹಾಜರುಪಡಿಸಲಾಯಿತು.
ನವೆಂಬರ್ 26ರಂದು ಅಲಿಯನ್ನು ನ್ಯಾಯಾಲಯವು ಒಂದು ವಾರ ಎನ್ಐಎ ವಶಕ್ಕೆ ಒಪ್ಪಿಸಿತ್ತು. ಮಂಗಳವಾರಕ್ಕೆ ಈ ಅವಧಿ ಮುಕ್ತಾಯಗೊಂಡಿತ್ತು.
ಹೆಚ್ಚಿನ ವಿಚಾರಣೆಗೆ ಮತ್ತೆ ವಶಕ್ಕೆ ನೀಡುವಂತೆ ಅಧಿಕಾರಿಗಳು ಮಾಡಿದ ಮನವಿಯನ್ನು ಪರಿಗಣಿಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಅಂಜು ಬಜಾಜ್ ಚಂದ್ನಾ, ಮತ್ತೆ ಒಂದು ವಾರ ಅವಧಿ ವಿಸ್ತರಿಸಿದರು.
ಕೆಂಪುಕೋಟೆ ಸಮೀಪ ಸ್ಫೋಟಗೊಂಡ ಕಾರು ರಷೀದ್ ಅಲಿಯ ಹೆಸರಿನಲ್ಲಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ ಎನ್ಐಎ 7 ಮಂದಿಯನ್ನು ಬಂಧಿಸಿದೆ.

