ಎನ್ಜಿಟಿಯ ಆರು ಸದಸ್ಯರ ವಿಶೇಷ ಪೀಠವು ಈ ಮೂಲಸೌಕರ್ಯ ಯೋಜನೆಯಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಪ್ರಮುಖ ಕಾರಣಗಳು ಕಂಡುಬಂದಿಲ್ಲವೆಂದು ಹೇಳಿದೆ.
ಯೋಜನೆಗೆ ನೀಡಿದ ಪರಿಸರ ಅನುಮೋದನೆಯಲ್ಲಿ ಅಗತ್ಯ ಭದ್ರತಾ ಕ್ರಮಗಳು ಒಳಗೊಂಡಿರುವುದಾಗಿ ಪೀಠವು ಗಮನಿಸಿದೆ.
ಪರಿಸರ ಸಂರಕ್ಷಣಾವಾದಿಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಭಾರೀ ಪರಿಸರ ಹಾನಿ ಉಂಟಾಗಬಹುದು ಹಾಗೂ ದ್ವೀಪದ ಆದಿವಾಸಿ ಸಮುದಾಯಗಳ ಜೀವನಕ್ಕೆ ಬೆದರಿಕೆ ಉಂಟಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು.
ಗ್ರೇಟ್ ನಿಕೋಬಾರ್ ಯೋಜನೆಗೆ ಅನುಮೋದನೆ ನೀಡಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಕ್ರಮವು ತೀವ್ರ ನಿರಾಶೆಯನ್ನುಂಟು ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಯೋಜನೆಗೆ ಅನುಮೋದನೆ ನೀಡಿದರೆ ದ್ವೀಪದ ಮೂಲ ನಿವಾಸಿ ಸಮುದಾಯಗಳ ಅಸ್ತಿತ್ವಕ್ಕೆ ಅಪಾಯ ಉಂಟುಮಾಡಬಹುದು ಎಂದು ಈ ಮೊದಲು ಸೋನಿಯಾ ಗಾಂಧಿ ಎಚ್ಚರಿಕೆಯನ್ನು ನೀಡಿದ್ದರು.

